<p><strong>ಬೆಂಗಳೂರು:</strong> ‘2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಹೂಡಿಕೆ ಘೋಷಣೆಯಾಗಿತ್ತು. ಅದರಲ್ಲಿ ಈಗಾಗಲೇ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮೋದನೆಗಳು ಸಿಕ್ಕಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.</p>.<p>‘ಸಮಾವೇಶದಲ್ಲಿ ₹6.23 ಲಕ್ಷ ಕೋಟಿ ಹೂಡಿಕೆ ಸಂಬಂಧ 98 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜತೆಗೆ ಇನ್ನೂ ₹4.03 ಲಕ್ಷ ಕೋಟಿ ಮೊತ್ತದ ಹೂಡಿಕೆಗೆ ಕಂಪನಿಗಳು ಆಸಕ್ತಿ ತೋರಿಸಿದ್ದವು. ಇವುಗಳಲ್ಲಿ ಈಗಾಗಲೇ ₹4.26 ಲಕ್ಷ ಕೋಟಿ ಹೂಡಿಕೆಗಾಗಿ ಕಂಪನಿಗಳು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪ್ರಸ್ತಾವಗಳನ್ನು ಸಲ್ಲಿಸಿವೆ’ ಎಂದಿದ್ದಾರೆ.</p>.<p>‘₹4.26 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಲ್ಲಿ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮತಿ ಮತ್ತು ಅನುಮೋದನೆ ದೊರೆತಿದೆ. ಇನ್ನೂ ₹90,779 ಕೋಟಿ ಮೊತ್ತದ ಪ್ರಸ್ತಾವಗಳು ಅನುಮೋದನೆಯ ವಿವಿಧ ಹಂತಗಳಲ್ಲಿ ಇವೆ. ₹12,236 ಕೋಟಿಯ ಹೂಡಿಕೆಗಳಿಗೆ ಅಂತಿಮ ಅನುಮೋದನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.ಸ</p>.<p>‘ಫೆಬ್ರುವರಿಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ–2025’ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ಎಮ್ವೀ ಎನರ್ಜಿ ಲಿಮಿಟೆಡ್ ₹5,000 ಕೋಟಿ, ದಾಲ್ಮಿಯಾ ಸಿಮೆಂಟ್ ₹3,000 ಕೋಟಿ, ಶ್ರೀ ಸಿಮೆಂಟ್ ₹2,500 ಕೋಟಿ, ಜಾನ್ ಡಿಸ್ಟಿಲರೀಸ್ ₹500 ಕೋಟಿ, ಕಾರ್ಲ್ಸ್ಬರ್ಗ್ ₹350 ಕೋಟಿ, ಸಂವರ್ಧನ ಮದರ್ಸನ್ ₹490 ಕೋಟಿ ಹೂಡಿಕೆಗೆ ಅನುಮೋದನೆ ದೊರೆತಿದೆ’ ಎಂದು ಇಲಾಖೆ ತಿಳಿಸಿದೆ.</p>.<p><strong>‘ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ಹೆಚ್ಚಾಗಿದೆ’</strong></p><p>‘ಇನ್ವೆಸ್ಟ್ ಕರ್ನಾಟಕ–2025 ನಂತರ ಕರ್ನಾಟಕದಲ್ಲಿ ಹೂಡಿಕೆಗೆ ಉದ್ಯಮಿಗಳು ಹೆಚ್ಚು ಆಸಕ್ತಿ <br>ತೋರಿಸುತ್ತಿದ್ದಾರೆ. ಕರ್ನಾಟಕವನ್ನು ದೇಶದ ಪ್ರಮುಖ ತಯಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಭೂಸ್ವಾಧೀನ, ಕೈಗಾರಿಕಾ ನಿವೇಶನ ಹಂಚಿಕೆ, ಹಣಕಾಸು ನೆರವು–ರಿಯಾಯಿತಿ ಮತ್ತು ಎಲ್ಲ ಅನುಮತಿಗಳನ್ನು ತ್ವರಿತಗತಿಯಲ್ಲಿ ದೊರಕಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.</p><p>‘ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹೂಡಿಕೆದಾರರ ಸಮಾವೇಶಲ್ಲಿ ಆಗಿದ್ದ <br>ಘೋಷಣೆಗಳಲ್ಲಿ, ₹4.09 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳಿಗೆ ಈಗ ಅನುಮತಿ ದೊರೆತಿದೆ. ಬಹುತೇಕ ಪ್ರಕ್ರಿಯೆಗಳು ನಮ್ಮ ಸರ್ಕಾರದ ಅವಧಿಯಲ್ಲಿ ಆಗಿವೆ. ಈ ಎಲ್ಲ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರದ ಏಕಗವಾಕ್ಷಿ ವ್ಯವಸ್ಥೆ ಮೂಲಕವೇ ಪೂರ್ಣಗೊಳಿಸಲಾಗಿದೆ. ಅನುಮತಿ ದೊರೆತಿರುವ ₹4.09 ಲಕ್ಷ ಕೋಟಿ ಪ್ರಸ್ತಾವಗಳಲ್ಲಿ, ಸುಮಾರು ₹1.87 ಲಕ್ಷ ಕೋಟಿ ಮೊತ್ತದ ಹೂಡಿಕೆಗಳ ಕೆಲಸಗಳು ಆರಂಭವಾಗಿವೆ’ ಎಂದು ಸಚಿವ ಪಾಟೀಲ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘2025ರ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು ₹10.27 ಲಕ್ಷ ಕೋಟಿ ಹೂಡಿಕೆ ಘೋಷಣೆಯಾಗಿತ್ತು. ಅದರಲ್ಲಿ ಈಗಾಗಲೇ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮೋದನೆಗಳು ಸಿಕ್ಕಿವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.</p>.<p>‘ಸಮಾವೇಶದಲ್ಲಿ ₹6.23 ಲಕ್ಷ ಕೋಟಿ ಹೂಡಿಕೆ ಸಂಬಂಧ 98 ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಜತೆಗೆ ಇನ್ನೂ ₹4.03 ಲಕ್ಷ ಕೋಟಿ ಮೊತ್ತದ ಹೂಡಿಕೆಗೆ ಕಂಪನಿಗಳು ಆಸಕ್ತಿ ತೋರಿಸಿದ್ದವು. ಇವುಗಳಲ್ಲಿ ಈಗಾಗಲೇ ₹4.26 ಲಕ್ಷ ಕೋಟಿ ಹೂಡಿಕೆಗಾಗಿ ಕಂಪನಿಗಳು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಪ್ರಸ್ತಾವಗಳನ್ನು ಸಲ್ಲಿಸಿವೆ’ ಎಂದಿದ್ದಾರೆ.</p>.<p>‘₹4.26 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಲ್ಲಿ ₹3.35 ಲಕ್ಷ ಕೋಟಿ ಮೊತ್ತದ ಪ್ರಸ್ತಾವಗಳಿಗೆ ಎಲ್ಲ ರೀತಿಯ ಅನುಮತಿ ಮತ್ತು ಅನುಮೋದನೆ ದೊರೆತಿದೆ. ಇನ್ನೂ ₹90,779 ಕೋಟಿ ಮೊತ್ತದ ಪ್ರಸ್ತಾವಗಳು ಅನುಮೋದನೆಯ ವಿವಿಧ ಹಂತಗಳಲ್ಲಿ ಇವೆ. ₹12,236 ಕೋಟಿಯ ಹೂಡಿಕೆಗಳಿಗೆ ಅಂತಿಮ ಅನುಮೋದನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.ಸ</p>.<p>‘ಫೆಬ್ರುವರಿಯಲ್ಲಿ ನಡೆದ ‘ಇನ್ವೆಸ್ಟ್ ಕರ್ನಾಟಕ–2025’ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರ ಎಮ್ವೀ ಎನರ್ಜಿ ಲಿಮಿಟೆಡ್ ₹5,000 ಕೋಟಿ, ದಾಲ್ಮಿಯಾ ಸಿಮೆಂಟ್ ₹3,000 ಕೋಟಿ, ಶ್ರೀ ಸಿಮೆಂಟ್ ₹2,500 ಕೋಟಿ, ಜಾನ್ ಡಿಸ್ಟಿಲರೀಸ್ ₹500 ಕೋಟಿ, ಕಾರ್ಲ್ಸ್ಬರ್ಗ್ ₹350 ಕೋಟಿ, ಸಂವರ್ಧನ ಮದರ್ಸನ್ ₹490 ಕೋಟಿ ಹೂಡಿಕೆಗೆ ಅನುಮೋದನೆ ದೊರೆತಿದೆ’ ಎಂದು ಇಲಾಖೆ ತಿಳಿಸಿದೆ.</p>.<p><strong>‘ಕರ್ನಾಟಕದಲ್ಲಿ ಹೂಡಿಕೆಗೆ ಆಸಕ್ತಿ ಹೆಚ್ಚಾಗಿದೆ’</strong></p><p>‘ಇನ್ವೆಸ್ಟ್ ಕರ್ನಾಟಕ–2025 ನಂತರ ಕರ್ನಾಟಕದಲ್ಲಿ ಹೂಡಿಕೆಗೆ ಉದ್ಯಮಿಗಳು ಹೆಚ್ಚು ಆಸಕ್ತಿ <br>ತೋರಿಸುತ್ತಿದ್ದಾರೆ. ಕರ್ನಾಟಕವನ್ನು ದೇಶದ ಪ್ರಮುಖ ತಯಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಭೂಸ್ವಾಧೀನ, ಕೈಗಾರಿಕಾ ನಿವೇಶನ ಹಂಚಿಕೆ, ಹಣಕಾಸು ನೆರವು–ರಿಯಾಯಿತಿ ಮತ್ತು ಎಲ್ಲ ಅನುಮತಿಗಳನ್ನು ತ್ವರಿತಗತಿಯಲ್ಲಿ ದೊರಕಿಸಿಕೊಡಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಎಂ.ಬಿ.ಪಾಟೀಲ ಅವರು ಹೇಳಿದ್ದಾರೆ.</p><p>‘ಹಿಂದಿನ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹೂಡಿಕೆದಾರರ ಸಮಾವೇಶಲ್ಲಿ ಆಗಿದ್ದ <br>ಘೋಷಣೆಗಳಲ್ಲಿ, ₹4.09 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳಿಗೆ ಈಗ ಅನುಮತಿ ದೊರೆತಿದೆ. ಬಹುತೇಕ ಪ್ರಕ್ರಿಯೆಗಳು ನಮ್ಮ ಸರ್ಕಾರದ ಅವಧಿಯಲ್ಲಿ ಆಗಿವೆ. ಈ ಎಲ್ಲ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರದ ಏಕಗವಾಕ್ಷಿ ವ್ಯವಸ್ಥೆ ಮೂಲಕವೇ ಪೂರ್ಣಗೊಳಿಸಲಾಗಿದೆ. ಅನುಮತಿ ದೊರೆತಿರುವ ₹4.09 ಲಕ್ಷ ಕೋಟಿ ಪ್ರಸ್ತಾವಗಳಲ್ಲಿ, ಸುಮಾರು ₹1.87 ಲಕ್ಷ ಕೋಟಿ ಮೊತ್ತದ ಹೂಡಿಕೆಗಳ ಕೆಲಸಗಳು ಆರಂಭವಾಗಿವೆ’ ಎಂದು ಸಚಿವ ಪಾಟೀಲ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>