ಕಾಂಗ್ರೆಸ್ ಭವಿಷ್ಯದ ಬಗ್ಗೆ ನಾನು ನನ್ನ ಪಕ್ಷದವರಿಗೆ ಮೊದಲೇ ಹೇಳಿದ್ದೆ, ಅರ್ಥಮಾಡಿಕೊಳ್ಳಿ, ನೀವು ಹೀಗೆ ದುರಹಂಕಾರ ಮಾಡಿಕೊಂಡು ಹೋದರೆ ಬಿಜೆಪಿಯನು ತಡೆಯಲು ಸಾಧ್ಯವಿಲ್ಲ. ನನ್ನ ಪಕ್ಷದವರಲ್ಲಿ ಕೈ ಮುಗಿದು, ಕಣ್ಣೀರು ಸುರಿಸಿ ಹೇಳಿದೆ. ಆದರೆ ನಮ್ಮ ಪಕ್ಷದವರಿಗೆ ಇದ್ಯಾವುದು ಅರ್ಥ ಆಗಲಿಲ್ಲ. ಇಂದು ಫಲಿತಾಂಶದ ಹೊರಬಿದ್ದಿದೆ. ಈಗಲಾದರೂ ಅರ್ಥ ಆಯಿತಾ ಎಂದು ನಮ್ಮ ಪಕ್ಷದವರನ್ನು ಕೇಳುತ್ತಿದ್ದೇನೆ. ನಾನು ಈ ಭವಿಷ್ಯವನ್ನು ಕೆಲವು ತಿಂಗಳ ಹಿಂದೆ ಹೇಳಿದ್ದೆ. ದುರಹಂಕಾರ ಮಾಡಬೇಡಿಎಂದು ಹೇಳಿದರು.