ಇದಕ್ಕೆ ರಾಹುಲ್ ಗಾಂಧಿ ಕಾಲೆಳೆದು ಟ್ವೀಟ್ ಮಾಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು, ‘ಸರ್ ನಿಮ್ಮ ಪೂರ್ವಜರ ಹೆಸರಲ್ಲಿ ಹುಟ್ಟಿಹಾಕಿರುವ ಬ್ರ್ಯಾಂಡ್ಗಳಿಗಿಂತ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ತಮಿಳುನಾಡಿನ ಆವಿನ್ ಹಾಗೂ ಕರ್ನಾಟಕದ ನಂದಿನಿ ಬ್ಯ್ರಾಂಡ್ಗಳು ಆತ್ಮನಿರ್ಭರ ಭಾರತ್ ಪರಿಕಲ್ಪನೆಯಲ್ಲಿ ಅಂತರರಾಷ್ಟ್ರೀಯ ಬ್ರಾಂಡ್ಗಳಾಗಿ ರೂಪಾಂತರಗೊಳ್ಳುತ್ತಿವೆ. ಅವುಗಳನ್ನು ಒಂದು ಸ್ಥಳಕ್ಕೆ ಸಿಮೀತ ಮಾಡಬೇಡಿ’ ಎಂಬ ಅರ್ಥದಲ್ಲಿ ತಿವಿದಿದ್ದಾರೆ.