ಮೇ ಕೊನೆ ವಾರದಲ್ಲಿ ಅಮೋಲ್ ಕಾಳೆಯನ್ನು ಎಸ್ಐಟಿಯವರು ಪುಣೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಹಿಂದುತ್ವವಾದಿ ಯುವಕರನ್ನು ಸೆಳೆಯಲು ಹಾಗೂ ಕರ್ನಾಟಕ ಮತ್ತು ಗೋವಾದಲ್ಲಿ ಚಟುವಟಿಕೆಗಳನ್ನು ನಡೆಸಲು, ತನಗೆ ಬೇಕಾದವರನ್ನು ಭೇಟಿಯಾಗಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ವಾಸವಿದ್ದ ಎನ್ನಲಾಗುತ್ತಿದೆ. ಇಲ್ಲಿಂದ ಪುಣೆ, ಗೋವಾಕ್ಕೆ ಆಗಾಗ ಓಡಾಡುತ್ತಿದ್ದ ಎಂದು ತಿಳಿದುಬಂದಿದೆ.