ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಸೇರಿ 63 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

2018ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ
Last Updated 28 ನವೆಂಬರ್ 2018, 14:34 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ಎಚ್‌.ಎಲ್‌. ದತ್ತು, ಮದ್ದಲೆ ಮಾಂತ್ರಿಕಹಿರಿಯಡ್ಕ ಗೋಪಾಲ ರಾವ್, ಹಿರಿಯ ಸಾಹಿತಿ ಎಂ.ಎಸ್‌. ಪ್ರಭಾಕರಸೇರಿ 63 ಸಾಧಕರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬುಧವಾರ ಸಂಜೆ ಬಿಡುಗಡೆ ಮಾಡಿದೆ.

ಉಪಚುನಾವಣೆಯ ಕಾರಣ ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೂ ಮುನ್ನ ಪ್ರಶಸ್ತಿ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗಿರಲಿಲ್ಲ.

ಇಬ್ಬರು ಶತಾಯುಷಿಗಳು: ಈ ಬಾರಿಯ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇಬ್ಬರು ಶತಾಯುಷಿಗಳ ಹೆಸರು ಇರುವುದು ವಿಶೇಷ. ಅವರೆಂದರೆ, ಕರಾವಳಿಯ ಗುರುವ ಕೊರಗ ಮತ್ತುಹಿರಿಯಡ್ಕ ಗೋಪಾಲ ರಾವ್.

ಪ್ರಶಸ್ತಿ ಪುರಸ್ಕೃತರು

ಸಾಹಿತ್ಯ


ಎಂ.ಎಸ್‌. ಪ್ರಭಾಕರ
ಹಸನ್ ನಯೀಮ್ ಸುರಕೋಡ್
ಚ.ಸರ್ವಮಂಗಳ
ಚಂದ್ರಶೇಖರ್ ತಾಳ್ಯ

ರಂಗಭೂಮಿ
ಎಸ್‌.ಎನ್ ರಂಗಸ್ವಾಮಿ
ಪುಟ್ಟಸ್ವಾಮಿ
ಪಂಪಣ್ಣ ಕೋಗಳಿ

ಸಂಗೀತ
ಅಣ್ಣು ದೇವಾಡಿಗ

ನೃತ್ಯ
ಎಂ.ಆರ್ ಕೃಷ್ಣಮೂರ್ತಿ

ಜಾನಪದ
ಗುರುವ ಕೊರಗ
ಇದನ್ನೂ ಓದಿ:ಗುರುವ ಕೊರಗ ಕರಾವಳಿಯ ನಿಜ ಮಾದರಿ
ಗಂಗ ಹುಚ್ಚಮ್ಮ
ಚನ್ನಮಲ್ಲೇಗೌಡ
ಶರಣಪ್ಪ ಬೂತೇರ
ಶಂಕ್ರಮ್ಮ ಮಹದೇವಪ್ಪ
ಬಸವರಾಜ ಅಲಗೂಡ
ಚೂಡಾಮಣಿ ರಾಮಚಂದ್ರ

ಶಿಲ್ಪಕಲೆ
ಯಮನಪ್ಪ ಚಿತ್ರಗಾರ
ಬಸಣ್ಣ ಕಾಳಪ್ಪ ಕಂಚಗಾರ

ಚಿತ್ರಕಲೆ
ಬಸವರಾಜ ರೇವಣ್ಣ ಸಿದ್ದಪ್ಪ ಉಪ್ಪಿನ

ಕ್ರೀಡೆ
ಕೆನೆತ್ ಪೊವೆಲ್
ವಿನಯ ವಿ.ಎಸ್
ಚೇತನ್ .ಆರ್

ಯಕ್ಷಗಾನ


ಹಿರಿಯಡ್ಕ ಗೋಪಾಲರಾವ್
ಸೀತಾರಾಮ ಕುಮಾರ ಕಟೀಲು

ಬಯಲಾಟ
ಯಲ್ಲವ್ವಾ ರೊಡ್ಡಪ್ಪನವರ
ಭೀಮರಾಯ ಬೋರಗಿ

ಚಲನಚಿತ್ರ
ಭಾರ್ಗವ‌
ಜೈ ಜಗದೀಶ್
ರಾಜನ್
ದತ್ತುರಾಜ್

ಶಿಕ್ಷಣ
ಗೀತಾ ರಾಮಾನುಜಂ
ಎ.ವಿ.ಎಸ್ ಮೂರ್ತಿ
ಡಾ.ಕೆ.ಪಿ ಗೋಪಾಲಕೃಷ್ಣ
ಶಿವಾನಂದ ಕೌಜಲಗಿ

ಎಂಜಿನಿಯರಿಂಗ್
ಪ್ರೊ.ಸಿ. ಇ. ಜಿ ಜಸ್ಟೋ

ಸಂಕೀರ್ಣ
ಆರ್‌.ಎಸ್ ರಾಜಾರಾಂ
ಮೇಜರ್ ಪ್ರದೀಪ್ ಆರ್ಯ
ಸಿ.ಕೆ ಜೋರಾಪುರ
ನರಸಿಂಹಯ್ಯ
ಡಿ.ಸುರೇಂದ್ರ ಕುಮಾರ್
ಶಾಂತಪ್ಪನವರ್ .ಪಿ.ಬಿ
ನಮಶಿವಯಾಂ ರೇಗುರಾಜ್
ಪಿ.ರಾಮದಾಸ್
ಎಂ.ಜೆ ಬ್ರಹ್ಮಯ್ಯ

ಪತ್ರಿಕೋದ್ಯಮ
ಜಿ.ಎನ್. ರಂಗನಾಥರಾವ್
ಬಸವರಾಜ ಸ್ವಾಮಿ
ಅಮ್ಮೆಂಬಳ ಆನಂದ

ಸಹಕಾರ
ಸಿ. ರಾಮು

ಸಮಾಜಸೇವೆ
ಆನಂದ್ ಸಿ. ಕುಂದರ್
ರಾಚಪ್ಪ ಹಡಪದ
ಕೃಷ್ಣಕುಮಾರ ಪೂಂಜ
ಮಾರ್ಗರೇಟ್ ಆಳ್ವ

ಕೃಷಿ
ಮಹಾದೇವಿ ಅಣ್ಣಾರಾವ ವಣದೆ
ಮೂಕಪ್ಪ ಪೂಜಾರ್

ಪರಿಸರ
ಕಲ್ಮನೆ ಕಾಮೇಗೌಡ

ಸಂಘ–ಸಂಸ್ಥೆ
ರಂಗದೊರೆ ಸ್ಮಾರಕ ಆಸ್ಪತ್ರೆ

ವೈದ್ಯಕೀಯ
ಡಾ. ನಾಡಗೌಡ ಜೆ.ವಿ.
ಡಾ. ಸೀತಾರಾಮ ಭಟ್
ಪಿ. ಮೋಹನ ರಾವ್
ಡಾ. ಎಂ.ಜಿ. ಗೋಪಾಲ್

ನ್ಯಾಯಾಂಗ
ಎಚ್‌.ಎ.ಎಲ್‌. ದತ್ತು

ಹೊರನಾಡು
ಡಾ. ಎ.ಎ. ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರರು


ಶ್ರೀ ಬಸವರಾಜ ಬಿಸರಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT