ನೆಲಮಂಗಲ, ಕೊರಟಗೆರೆ, ಚಿಕ್ಕಬಳ್ಳಾಪುರ, ಶ್ರೀರಂಗಪಟ್ಟಣ, ಬೆಂಗಳೂರು ಮತ್ತು ಆಂಧ್ರಪ್ರದೇಶದ ಮಡಕಾಶಿರದಲ್ಲಿ ಕೃಷಿ, ಕೃಷಿಯೇತರ ಭೂಮಿ, ಕಟ್ಟಡಗಳು, ವಸತಿ ಫ್ಲಾಟ್, ಕಾರ್ಖಾನೆಗಳನ್ನು ಒಳಗೊಂಡ ಸ್ಥಿರಾಸ್ತಿಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಪ್ರಕಾರ ವಶಕ್ಕೆ ಪಡೆಯಲು ಇ.ಡಿ ಆದೇಶಿಸಿದೆ. ಈ ಹಿಂದೆ ₹255.17 ಕೋಟಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಿತ್ತು. ಹೆಚ್ಚಿನ ಬಡ್ಡಿದರದ ಆಮಿಷ ಒಡ್ಡಿ ಏಜೆಂಟ್ಗಳ ಮೂಲಕ ₹650 ಕೋಟಿ ಸಂಗ್ರಹಿಸಿ ಮೋಸ ಮಾಡಿದ್ದ ಆರೋಪದಲ್ಲಿ ಬಸವೇಶ್ವರ
ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು.