‘ಈಗ ಮನೆಯಲ್ಲಿ ಕುಳಿತರೆ ಜೀವನ ಪರ್ಯಂತ ಮನೆಯಲ್ಲೇ ಕೂರಬೇಕು. ಯಡಿಯೂರಪ್ಪ ಒಮ್ಮೆ ಮಾತುಕತೆ ಮಾಡಿ, ಈಗ ಸುಮ್ಮನಿರು, ನಿಗಮ– ಮಂಡಳಿಗೆ ನೇಮಕ ಮಾಡುವೆ ಎಂಬುದಾಗಿ ತಿಳಿಸಿದರು. ಅವರ ಮಾತು ಕೇಳಿ ಸುಮ್ಮನಿದ್ದೆ. ಈಗ ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎನ್ನುತ್ತಿದ್ದಾರೆ. ಆಗುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಈಗ ಎಲ್ಲವೂ ಮುಗಿದ ಅಧ್ಯಾಯ’ ಎಂದರು.