ಕೆಇಎನಲ್ಲಿ ಆಡಳಿತಾಧಿಕಾರಿಯೇ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧಿಕಾರಿಯಾಗಿದ್ದು, ಪ್ರತಿಯೊಂದು ಕಡತವೂ ಅವರ ಸುಪರ್ದಿಯಲ್ಲೇ ಮುಂದೆ ಸಾಗಬೇಕಾಗುತ್ತದೆ. ನವೆಂಬರ್ನಲ್ಲಿ ಎಂ.ಶಿಲ್ಪಾ ಅವರು ವರ್ಗಾವಣೆಗೊಂಡ ಬಳಿಕ ಅಲ್ಲಿಗೆ ಆಡಳಿತಾಧಿಕಾರಿಯೇ ಇಲ್ಲ. ಸದ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೇ ಹೆಚ್ಚುವರಿ ಹೊಣೆ ಹೊತ್ತು ಕಾರ್ಯ ನಿರ್ವಹಿಸುತ್ತಿದ್ದಾರೆ.