<p><strong>ಚಿತ್ರದುರ್ಗ:</strong> ನ್ಯಾಯ ದೊರಕಿಸಿಕೊಡಿ ಎಂದು ಅಂಗಲಾಚಿದ ವ್ಯಕ್ತಿಯೊಬ್ಬರಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಜಾಡಿಸಿ ಒದೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>ಸಚಿವರು ಕಾರಲ್ಲಿ ಕುಳಿತು ಪ್ರಯಾಣಕ್ಕೆ ಅಣಿಯಾಗುತ್ತಿರುವಾಗ ವ್ಯಕ್ತಿಯೊಬ್ಬರು ಸಮಸ್ಯೆ ತೋಡಿಕೊಂಡು ನ್ಯಾಯಕ್ಕಾಗಿ ಅಂಗಲಾಚಿದ್ದು ವಿಡಿಯೊದಲ್ಲಿದೆ. ಇದು ಕೆಲ ವರ್ಷದ ಹಳೆಯ ವಿಡಿಯೊ ಎನ್ನಲಾಗಿದ್ದು, ಭೂಕಬಳಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ಬಳಿಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.</p>.<p>‘ತುಂಬಾ ತೊಂದರೆಯಲ್ಲಿದ್ದೇನೆ, ದಯಮಾಡಿ ಅವರನ್ನು ಕರೆಸಿ ನ್ಯಾಯ ದೊರಕಿಸಿಕೊಡಿ..’ ಎಂದು ವ್ಯಕ್ತಿಯೊಬ್ಬರು ಸುಧಾಕರ್ ಅವರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ತಾಳ್ಮೆ ಕಳೆದುಕೊಂಡ ಸುಧಾಕರ್, ‘ಇಲ್ಲಿದ್ದರೆ ಜಾಡಿಸಿ ಒದೆಯುತ್ತೇನೆ. ಇಲ್ಲಿಂದ ಮೊದಲು ಹೊರಡು..’ ಎನ್ನುತ್ತಲೇ ಸಿಟ್ಟಿನಿಂದ ಕಾರು ಇಳಿದಿದ್ದು ವಿಡಿಯೊದಲ್ಲಿದೆ.</p><p>ಇದನ್ನೂ ಓದಿ</p><p><a href="https://www.prajavani.net/amp/district/news/karnataka-news/minister-d-sudhakar-case-2478557">ಭೂಕಬಳಿಕೆ, ಹಲ್ಲೆ ಆರೋಪ: ದೂರುದಾರರಿಗೆ ಸಚಿವ ಡಿ.ಸುಧಾಕರ್ ಬೆದರಿಕೆ?</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ:</strong> ನ್ಯಾಯ ದೊರಕಿಸಿಕೊಡಿ ಎಂದು ಅಂಗಲಾಚಿದ ವ್ಯಕ್ತಿಯೊಬ್ಬರಿಗೆ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಜಾಡಿಸಿ ಒದೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾದ ಮತ್ತೊಂದು ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.</p><p>ಸಚಿವರು ಕಾರಲ್ಲಿ ಕುಳಿತು ಪ್ರಯಾಣಕ್ಕೆ ಅಣಿಯಾಗುತ್ತಿರುವಾಗ ವ್ಯಕ್ತಿಯೊಬ್ಬರು ಸಮಸ್ಯೆ ತೋಡಿಕೊಂಡು ನ್ಯಾಯಕ್ಕಾಗಿ ಅಂಗಲಾಚಿದ್ದು ವಿಡಿಯೊದಲ್ಲಿದೆ. ಇದು ಕೆಲ ವರ್ಷದ ಹಳೆಯ ವಿಡಿಯೊ ಎನ್ನಲಾಗಿದ್ದು, ಭೂಕಬಳಿಕೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾದ ಬಳಿಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.</p>.<p>‘ತುಂಬಾ ತೊಂದರೆಯಲ್ಲಿದ್ದೇನೆ, ದಯಮಾಡಿ ಅವರನ್ನು ಕರೆಸಿ ನ್ಯಾಯ ದೊರಕಿಸಿಕೊಡಿ..’ ಎಂದು ವ್ಯಕ್ತಿಯೊಬ್ಬರು ಸುಧಾಕರ್ ಅವರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾರೆ. ತಾಳ್ಮೆ ಕಳೆದುಕೊಂಡ ಸುಧಾಕರ್, ‘ಇಲ್ಲಿದ್ದರೆ ಜಾಡಿಸಿ ಒದೆಯುತ್ತೇನೆ. ಇಲ್ಲಿಂದ ಮೊದಲು ಹೊರಡು..’ ಎನ್ನುತ್ತಲೇ ಸಿಟ್ಟಿನಿಂದ ಕಾರು ಇಳಿದಿದ್ದು ವಿಡಿಯೊದಲ್ಲಿದೆ.</p><p>ಇದನ್ನೂ ಓದಿ</p><p><a href="https://www.prajavani.net/amp/district/news/karnataka-news/minister-d-sudhakar-case-2478557">ಭೂಕಬಳಿಕೆ, ಹಲ್ಲೆ ಆರೋಪ: ದೂರುದಾರರಿಗೆ ಸಚಿವ ಡಿ.ಸುಧಾಕರ್ ಬೆದರಿಕೆ?</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>