ಗದ್ದಲ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಜನಸೇವೆಯ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದೇವೆ. ಮಾಧ್ಯಮ, ಸಿನಿಮಾ, ಬರಹಗಳಲ್ಲಿ ರಾಜಕಾರಣಿಗಳನ್ನು ಚಿತ್ರಿಸುತ್ತಿರುವ ಪರಿ ನೋಡಿದರೆ ಬೇಸರ ಆಗುತ್ತದೆ. ಈ ಸ್ಥಿತಿ ತಲುಪಿರುವುದು ದುರ್ದೈವ. ಸೈಬರ್ ಮತ್ತು ಆಡಿಯೊ ರೆಕಾರ್ಡಿಂಗ್ ನಿಯಂತ್ರಿಸಲು ಕ್ರಮ ಅಗತ್ಯ’ ಎಂದರು.