‘ದೇಶದ ನಿವಾಸಿಗಳು ಮಾಲಿನ್ಯಯುಕ್ತ ಪರಿಸರದಲ್ಲಿ ರೋಗದಿಂದ ಬಳಲಬಾರದು. ಎಲ್ಲರಿಗೂ ಮಾಲಿನ್ಯ ಮುಕ್ತ ವಾತಾವರಣ ಲಭ್ಯವಾಗಲು ಕೆಎಸ್ಪಿಸಿಬಿ ವಾಯು ಮತ್ತು ಜಲ ಕಾಯ್ದೆ ನಿರ್ವಹಿಸುವ ಸೂಕ್ತ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ. ಆದ್ದರಿಂದ, ರಾಜ್ಯದಾದ್ಯಂತ ವಾಯು ಗುಣಮಟ್ಟ ನಿಗಾ ವ್ಯವಸ್ಥೆಯ ಕುರಿತಾದ ವಿಸ್ತೃತ ಯೋಜನಾ ವರದಿಯನ್ನು ಮುಂದಿನ ಆರು ವಾರಗಳಲ್ಲಿ ಸಲ್ಲಿಸಿ’ ಎಂದು ಕೆಎಸ್ಪಿಸಿಬಿಗೆ ನಿರ್ದೇಶಿಸಿದೆ.