ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಖರ್ಗೆ ಅನುಭವಿ. ಅವರು ಬೀಸು ಹೇಳಿಕೆ ನೀಡುವುದಿಲ್ಲ. ಅವರ ಮಾತಿಗೆ ಬಹಳ ಮೌಲ್ಯವಿದೆ. ಅವರಮಾತುಗಳನ್ನು ಆ ಪಕ್ಷದ ಮುಖಂಡರು ಕೇಳುತ್ತಾರೆ’.‘ಖರ್ಗೆ ಅವರ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರು ಯಾವತ್ತೂ ಹಗುರವಾಗಿ ಮಾತನಾಡುವುದಿಲ್ಲ. ಊಹಾಪೋಹ ಹುಟ್ಟು ಹಾಕುವವರಲ್ಲ. ಬಣ್ಣದ ಕಾಗೆ ಹಾರಿಸುವವರಲ್ಲ. ಅವರಿಗಿಂತ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ಅನುಭವ ದೊಡ್ಡದು. ಇಬ್ಬರೂ ಸೇರಿದರೆ ಏನಾದರೂ ಮಾಡುತ್ತಾರೆ. ಎರಡು ಹಳೆ ಹುಲಿಗಳು ಒಂದೆಡೆ ಸೇರಿದರೆ ಏನೇನಾಗುತ್ತದೆಯೋ ಹೇಳಲು ಆಗುವುದಿಲ್ಲ. ಏನೋ ಇದೆ ಎನ್ನುತ್ತಾರಲ್ಲಾ ಹಾಗೆ ಏನೋ ಆಗಲಿದೆ’ ಎಂದು ಹೇಳಿದರು.