ಬೆಂಗಳೂರು: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಮತ್ತು ವಾಹನದ ಬಾಗಿಲುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಕೆಎಸ್ಆರ್ಟಿಸಿ ಸಿಬ್ಬಂದಿ ಮತ್ತು ಜಾಗೃತ ನಿರ್ದೇಶಕರು ಸೂಚನೆಗಳನ್ನು ನೀಡಿದ್ದಾರೆ.
ಹಾವೇರಿ ವಿಭಾಗದ ಹಾನಗಲ್ ಘಟಕಕ್ಕೆ ಸೇರಿದ ಬಸ್ನಿಂದ ಬಿದ್ದು ವಿದ್ಯಾರ್ಥಿನಿಯೊಬ್ಬರು ಸಾವಿಗೀಡಾಗಿದ್ದರಿಂದ ಈ ನಿರ್ದೇಶನಗಳನ್ನು ನೀಡಲಾಗಿದೆ.
ಸಿಬ್ಬಂದಿಗಳಿಗೆ KSRTC ನೀಡಿದ ಸೂಚನೆಗಳು ಹೀಗಿವೆ:
ಸಾರಿಗೆ ಬಸ್ಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಚಾಲಕರು ಬಸ್ಗಳನ್ನು ಘಟಕದಿಂದ ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ವಾಹನದ ಬಾಗಿಲುಗಳು ಪರಿಶೀಲಿಸಬೇಕು.
ಬಸ್ ನಿಲ್ದಾಣಗಳಲ್ಲಿ ನಿರ್ವಾಹಕರು ಬಸ್ನ ಹಿಂಬಾಗಿಲು ಮುಚ್ಚಿರುವ ಬಗ್ಗೆ ತಿಳಿದುಕೊಂಡು ಚಾಲಕರಿಗೆ ವಾಹನ ಚಲಾಯಿಸುವಂತೆ ಸೂಚನೆ ನೀಡಬೇಕು.
ಬಸ್ನ ಫುಟ್ಬೋರ್ಡ್ನಲ್ಲಿ ಪ್ರಯಾಣಿಕರು ನಿಂತುಕೊಳ್ಳಲು ಅವಕಾಶ ನೀಡಬಾರದು.
ಚಾಲಕರು ಬಸ್ನ ಹಿಂದಿನ ಮತ್ತು ಮುಂದಿನ ಬಾಗಿಲು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲನೆ ಮಾಡಬೇಕು.
ಬಸ್ ನಿಲ್ದಾಣ ತಲುಪುವ ಮುಂಚೆ ವಾಹನದ ಬಾಗಿಲು ತೆರೆಯದೆ, ಬಸ್ ನಿಲುಗಡೆಯ ನಂತರ ಬಾಗಿಲುಗಳನ್ನು ತೆರೆಯಬೇಕು.