ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಛಂದ ಪುಸ್ತಕ’ ಬಹುಮಾನ ನಿರಾಕರಿಸಿದ ಫಾತಿಮಾ

Last Updated 17 ನವೆಂಬರ್ 2022, 21:23 IST
ಅಕ್ಷರ ಗಾತ್ರ

ಬೆಂಗಳೂರು: ಕಥಾ ಸಂಕಲನದ ಹಸ್ತಪ್ರತಿಗೆ ‘ಛಂದ ಪುಸ್ತಕ’ವು ನೀಡುವ ಬಹುಮಾನಕ್ಕೆ 2022ನೇ ಸಾಲಿನಲ್ಲಿ ಫಾತಿಮಾ ರಲಿಯಾ ಅವರ ಅಪ್ರಕಟಿತ ಕೃತಿ ಆಯ್ಕೆಯಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಈ ಬಹುಮಾನ ಸ್ವೀಕರಿಸಲು ಫಾತಿಮಾ ನಿರಾಕರಿಸಿದ್ದಾರೆ.

ದಕ್ಷಿಣ ಕನ್ನಡದ ಪೆರ್ನೆ ಗ್ರಾಮದ ಕತೆಗಾರ್ತಿ ಫಾತಿಮಾ, ಸದ್ಯ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸವಿದ್ದಾರೆ. ಇವರು ಎಂಬಿಎ ಪದವೀಧರರು. ‘ವೈಯಕ್ತಿಕ ಕಾರಣಕ್ಕೆ ಬಹುಮಾನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ. ಈ ವಿಷಯವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ಹೇಳಿದ್ದಾರೆ.

‘ಫಾತಿಮಾ ಖಾಸಗಿ ಕಾರಣಗ ಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಅವರ ಆಯ್ಕೆ ಸ್ವಾತಂತ್ರ್ಯವನ್ನು ಛಂದ ಪುಸ್ತಕ ಗೌರವಿಸುತ್ತದೆ. ಮುಂದಿನ 4 ವಾರಗಳಲ್ಲಿ ನಮ್ಮ ಪರ್ಯಾಯ ಯೋಜನೆಯನ್ನು ತಿಳಿಸುತ್ತೇವೆ‌. ಛಂದದ ಓದುಗರಿಗೆ ಹೀಗೆ ಗೊಂದಲ ಉಂಟು ಮಾಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ’ ಎಂದು ಛಂದ ಪುಸ್ತಕ ಪ್ರಕಾಶಕರೂ ಆಗಿರುವ ಸಾಹಿತಿ ವಸುಧೇಂದ್ರ ಗುರುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT