‘ನಿವೇಶನ ಮಂಜೂರು ಮಾಡುವಂತೆ ಕೋರಿ ನಾನು ಸಲ್ಲಿಸಿದ್ದ ಅರ್ಜಿಯನ್ನು ಮುಡಾ ಮಾನ್ಯ ಮಾಡಿತ್ತು. ಆದರೆ, ಮೈಸೂರು ವಿಭಾಗೀಯ ಆಯುಕ್ತರು ನನ್ನ ಮನವಿಯನ್ನು ತಿರಸ್ಕರಿಸಿದರು. ಅಂತರಧರ್ಮೀಯ ವಿವಾಹವಾಗಿರುವ ಕಾರಣಕ್ಕಾಗಿ ಸಂಬಂಧಿಕರು ನೆರವಿಗೆ ಬರಲಿಲ್ಲ. ಮೈಸೂರು ವಿಭಾಗೀಯ ಆಯುಕ್ತರ ಕಚೇರಿ, ವಿಧಾನಸೌಧಕ್ಕೆ ಹೋಗಿ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಸಲ್ಲಿಸಿದ ಅರ್ಜಿಗಳ ಸಂಖ್ಯೆಯೇ ನನಗೆ ಮರೆತುಹೋಗಿದೆ’ ಎಂದು ಗುರುತು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ಈ ಮಹಿಳೆ ವಿವರಿಸಿದರು.