ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠವನ್ನು ಮಂಗಳವಾರದಿಂದ ದರ್ಶನಕ್ಕೆ ತೆರೆಯಲಾಗಿದ್ದು, ಮೊದಲ ದಿನ ಸ್ಥಳೀಯ ಭಕ್ತರು ಮಾತ್ರ ರಾಯರ ಮೂಲವೃಂದಾವನ ದರ್ಶನ ಪಡೆದರು.
ಹೊರಜಿಲ್ಲೆಗಳಿಂದ ಇನ್ನೂ ಬಸ್ ಸಂಚಾರ ಸಾಕಷ್ಟು ಆರಂಭವಾಗಿಲ್ಲ. ಹೀಗಾಗಿ ರಾಯಚೂರು ಹಾಗೂ ಮಂತ್ರಾಲಯ ಅಕ್ಕಪಕ್ಕದ ಗ್ರಾಮಗಳಿಂದ ಕೆಲವೇ ಭಕ್ತರು ಕೋವಿಡ್ ನಿಯಮಗಳ ಪಾಲನೆಯೊಂದಿಗೆ ದರ್ಶನಕ್ಕಾಗಿ ಬಂದಿದ್ದರು.
ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸದ್ಯಕ್ಕೆ ಅನ್ನಪ್ರಸಾದ ವ್ಯವಸ್ಥೆ ಮಠದಿಂದ ಮಾಡುತ್ತಿಲ್ಲ. ಆದರೆ ಭಕ್ತರಿಗೆ ವಸತಿಗೃಹ ಒದಗಿಸಲಾಗುತ್ತಿದೆ.