ಚಾಮರಾಜನಗರ: ತಾಲ್ಲೂಕಿನ ಬಿಸಲವಾಡಿ ಗ್ರಾಮದ ಬಿಳಿಕಲ್ಲು ಕ್ವಾರಿಯೊಂದರಲ್ಲಿ ಸೋಮವಾರ ಕಲ್ಲು ಕುಸಿದು ಕಾಗಲವಾಡಿ ಮೋಳೆಯ ಕಾರ್ಮಿಕರಾದ ಕುಮಾರ್ (28), ಶಿವರಾಜು (35) ಮತ್ತು ಸಿದ್ದರಾಜು (27) ಎಂಬವರು ಮೃತಪಟ್ಟಿದ್ದಾರೆ. ‘ಗಣಿಯಲ್ಲಿ 12 ಕಾರ್ಮಿಕರು ಕೆಲಸ ಮಾಡುತ್ತಿದ್ದರು’ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.