<p><strong>ಮೈಸೂರು</strong>: ಕುರುಬರನ್ನು ಪರಿಶಿಷ್ಟ ಪಂಗಡದ (ಎಸ್ಟಿ) ಪಟ್ಟಿಗೆ ಸೇರಿಸುವಂತೆ, ಸಮುದಾಯವು ನಡೆಸುತ್ತಿರುವ ಹೋರಾಟದ ನಾಯಕತ್ವವನ್ನು ಸಿದ್ದರಾಮಯ್ಯ ಅವರೇ ವಹಿಸಿಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಶುಕ್ರವಾರ ಇಲ್ಲಿ ಆಹ್ವಾನ ನೀಡಿದರು.</p>.<p>ಕುರುಬರ ಹೋರಾಟವನ್ನು ಯಾರೂ ಹೈಜಾಕ್ ಮಾಡುತ್ತಿಲ್ಲ. ಸಮಾಜವು ಅವರನ್ನು ಎಂದಿಗೂ ಅಗೌರವದಿಂದ ಕಂಡಿಲ್ಲ. ಟಾರ್ಗೆಟ್ನ ಪ್ರಶ್ನೆಯೇ ಇಲ್ಲಿಲ್ಲ ಎಂದರು.</p>.<p>‘ಸಮುದಾಯದ ಏಳ್ಗೆ, ಮಠ ಸ್ಥಾಪನೆ, ಕನಕ ಗೋಪುರದ ವಿಷಯದಲ್ಲಿ ಸಿದ್ದರಾಮಯ್ಯ ಈ ಹಿಂದಿನಿಂದಲೂ ಕುರುಬ ಸಮುದಾಯಕ್ಕೆ ಅಸಹಕಾರ ತೋರಿದ್ದಾರೆ. ಅವರು ಮುಖ್ಯಮಂತ್ರಿಯಿದ್ದಾಗ ಕುರುಬ ಸಮಾಜಕ್ಕೆ ಗುರುತರ ಕೊಡುಗೆ ಕೊಟ್ಟಿಲ್ಲ. ಈಗಲಾದರೂ ಸಮಾಜದ ಹಿತಕ್ಕಾಗಿ ಹೋರಾಟದ ಮುಂಚೂಣಿ ವಹಿಸಿದರೆ, ನಾವು ಅವರ ಹಿಂದೆ ನಿಲ್ಲುತ್ತೇವೆ. ನಾಯಕತ್ವ ಬಿಟ್ಟುಕೊಟ್ಟು ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಿಮ್ಮ ಬೆಳವಣಿಗೆಯಲ್ಲಿ ಸಮುದಾಯದ ತ್ಯಾಗ ದೊಡ್ಡದಿದೆ. ಬಹಳಷ್ಟು ಮಂದಿ ನಿಮಗಾಗಿ ಕುರಿ ಮಾರಿದ್ದಾರೆ. ನೀವೇ ಹೋರಾಟ ಅಲ್ಲಗಳೆದರೆ ಹೇಗೆ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.</p>.<p>‘ನೀವೇ ಮಾಡಿಸಿದ ಸಾಮಾಜಿಕ– ಆರ್ಥಿಕ– ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯ ವರದಿಯನ್ನು ಸ್ವೀಕರಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರೆ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಿರಿ. ರಮೇಶ್ಕುಮಾರ್ ಮಾತು ಕೇಳಿ ಯಶಸ್ವಿನಿ ಯೋಜನೆ ಕೊಂದಿರಿ. ಇನ್ನಾದರೂ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ’ ಎಂದು ಸಲಹೆ ನೀಡಿದರು.</p>.<p><strong>ಬೀದಿ ಹೋರಾಟ ಏಕೆ ಬೇಕು?: ಸಿದ್ದರಾಮಯ್ಯ</strong></p>.<p>‘ಹೋರಾಟದ ನೇತೃತ್ವವನ್ನು ಯಾರು ವಹಿಸುವರು ಎಂಬುದು ಮುಖ್ಯವಲ್ಲ. ಈಶ್ವರಪ್ಪ, ವಿಶ್ವನಾಥ್ ಅಥವಾ ಸ್ವಾಮೀಜಿ ಯಾರಾದರೂ ಇರಲಿ. ಆದರೆ, ಈ ಹೋರಾಟದ ಅಗತ್ಯ ಇದೆಯೇ? ಬೀದಿ ಹೋರಾಟ ಏಕೆ ಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಪ್ರಶ್ನಿಸಿದರು.</p>.<p>‘ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಯಾರಾದರೂ ದೇವರನ್ನು ಬಹುವಚನದಲ್ಲಿ ಕರೆಯೋದನ್ನು ನೋಡಿದ್ದೀರಾ?’ ಎಂದು ಅವರು ವಿಶ್ವನಾಥ್ಗೆ ತಿರುಗೇಟು ನೀಡಿದರು.</p>.<p>‘ಇವನು ಏಕವಚನದಲ್ಲಿ ಎಷ್ಟು ಸಲ ಮಾತನಾಡಿದ್ದಾನೆ ಎಂಬುದನ್ನು ತೋರಿಸಲಾ? ಕೆ.ಆರ್.ನಗರ ಶಾಸಕರ ವಿರುದ್ಧ ಇವ ಯಾವ ಭಾಷೆಯಲ್ಲಿ ಮಾತನಾಡಿದ್ದ? ನಾನು ಉದ್ದೇಶಪೂರ್ವಕವಾಗಿ ಏಕವಚನದಲ್ಲಿ ಮಾತನಾಡುವುದಿಲ್ಲ ಎಂದರು.</p>.<p class="Briefhead"><strong>ಜಿಟಿಡಿಗೆ ಕೊಟ್ಟಿದ್ದು ಎಷ್ಟು ಕೋಟಿ?</strong></p>.<p>ಹುಣಸೂರು ಉಪ ಚುನಾವಣೆ ಖರ್ಚಿಗಾಗಿ ಮುಖ್ಯಮಂತ್ರಿ ನೀಡಿದ್ದ ಹಣವನ್ನು ಸಿ.ಪಿ.ಯೋಗೇಶ್ವರ್, ಎನ್.ಆರ್.ಸಂತೋಷ್ ಎತ್ತಿಕೊಂಡು ಹೋದರು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದ . ವಿಶ್ವನಾಥ್, ‘ನನ್ನ ಹೇಳಿಕೆಯಂತೆ ದೊಡ್ಡ ಮೊತ್ತ ಎಂದರೆ ₹ 5 ಲಕ್ಷವಷ್ಟೆ’ ಎಂದರು.</p>.<p>‘ದೊಡ್ಡ ಮೊತ್ತ ಎಂದರೆ, ಮುಖ್ಯಮಂತ್ರಿಯಾಗಿದ್ದ ನಿಮಗೆ ಹಲವು ಕೋಟಿಗಳು. ನೀವೇ ಹೇಳಿದಂತೆ ಶಾಸಕ ಜಿ.ಟಿ.ದೇವೇಗೌಡರಿಗೆ ನೀವು ಕೊಟ್ಟ ಹಣ ಎಷ್ಟು ಕೋಟಿ? ಅದು ಬಿಳಿಯೋ? ಕಪ್ಪೋ? ಎಂಬುದನ್ನು ಬಹಿರಂಗಪಡಿಸಿ’ ಎಂದರು.</p>.<p class="Briefhead"><strong>‘ಜಂಗಲ್ ಸಂಸ್ಕೃತಿ’ಯ ಸಿದ್ದರಾಮಯ್ಯ</strong></p>.<p><strong>ಬೆಂಗಳೂರು: </strong>‘ಲವ್ ಜಿಹಾದ್’ ತಡೆಗೆ ಕಾಯ್ದೆ ತರಲು ಸರ್ಕಾರ ಮುಂದಾಗಿರುವ ಬಗ್ಗೆ ಸಿದ್ದರಾಮಯ್ಯ ನೀಡಿರುವ ಬೇಜವಾಬ್ದಾರಿ ಹೇಳಿಕೆಯು ಜಂಗಲ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.</p>.<p>ಹಿಂದೂ ಮಹಿಳೆಯರನ್ನು ‘ಲವ್ ಜಿಹಾದ್’ ಮೂಲಕ ಮತಾಂತರಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಅನಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಕಾನೂನು ರೂಪಿಸುತ್ತಿದೆ. ‘ಕ್ರಾಸ್ ಬ್ರೀಡ್’ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಕುರುಬರನ್ನು ಪರಿಶಿಷ್ಟ ಪಂಗಡದ (ಎಸ್ಟಿ) ಪಟ್ಟಿಗೆ ಸೇರಿಸುವಂತೆ, ಸಮುದಾಯವು ನಡೆಸುತ್ತಿರುವ ಹೋರಾಟದ ನಾಯಕತ್ವವನ್ನು ಸಿದ್ದರಾಮಯ್ಯ ಅವರೇ ವಹಿಸಿಕೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಶುಕ್ರವಾರ ಇಲ್ಲಿ ಆಹ್ವಾನ ನೀಡಿದರು.</p>.<p>ಕುರುಬರ ಹೋರಾಟವನ್ನು ಯಾರೂ ಹೈಜಾಕ್ ಮಾಡುತ್ತಿಲ್ಲ. ಸಮಾಜವು ಅವರನ್ನು ಎಂದಿಗೂ ಅಗೌರವದಿಂದ ಕಂಡಿಲ್ಲ. ಟಾರ್ಗೆಟ್ನ ಪ್ರಶ್ನೆಯೇ ಇಲ್ಲಿಲ್ಲ ಎಂದರು.</p>.<p>‘ಸಮುದಾಯದ ಏಳ್ಗೆ, ಮಠ ಸ್ಥಾಪನೆ, ಕನಕ ಗೋಪುರದ ವಿಷಯದಲ್ಲಿ ಸಿದ್ದರಾಮಯ್ಯ ಈ ಹಿಂದಿನಿಂದಲೂ ಕುರುಬ ಸಮುದಾಯಕ್ಕೆ ಅಸಹಕಾರ ತೋರಿದ್ದಾರೆ. ಅವರು ಮುಖ್ಯಮಂತ್ರಿಯಿದ್ದಾಗ ಕುರುಬ ಸಮಾಜಕ್ಕೆ ಗುರುತರ ಕೊಡುಗೆ ಕೊಟ್ಟಿಲ್ಲ. ಈಗಲಾದರೂ ಸಮಾಜದ ಹಿತಕ್ಕಾಗಿ ಹೋರಾಟದ ಮುಂಚೂಣಿ ವಹಿಸಿದರೆ, ನಾವು ಅವರ ಹಿಂದೆ ನಿಲ್ಲುತ್ತೇವೆ. ನಾಯಕತ್ವ ಬಿಟ್ಟುಕೊಟ್ಟು ಅವರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</p>.<p>‘ನಿಮ್ಮ ಬೆಳವಣಿಗೆಯಲ್ಲಿ ಸಮುದಾಯದ ತ್ಯಾಗ ದೊಡ್ಡದಿದೆ. ಬಹಳಷ್ಟು ಮಂದಿ ನಿಮಗಾಗಿ ಕುರಿ ಮಾರಿದ್ದಾರೆ. ನೀವೇ ಹೋರಾಟ ಅಲ್ಲಗಳೆದರೆ ಹೇಗೆ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.</p>.<p>‘ನೀವೇ ಮಾಡಿಸಿದ ಸಾಮಾಜಿಕ– ಆರ್ಥಿಕ– ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ)ಯ ವರದಿಯನ್ನು ಸ್ವೀಕರಿಸಿ, ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದರೆ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಿರಿ. ರಮೇಶ್ಕುಮಾರ್ ಮಾತು ಕೇಳಿ ಯಶಸ್ವಿನಿ ಯೋಜನೆ ಕೊಂದಿರಿ. ಇನ್ನಾದರೂ ಏಕವಚನದಲ್ಲಿ ಮಾತನಾಡುವುದನ್ನು ಬಿಡಿ’ ಎಂದು ಸಲಹೆ ನೀಡಿದರು.</p>.<p><strong>ಬೀದಿ ಹೋರಾಟ ಏಕೆ ಬೇಕು?: ಸಿದ್ದರಾಮಯ್ಯ</strong></p>.<p>‘ಹೋರಾಟದ ನೇತೃತ್ವವನ್ನು ಯಾರು ವಹಿಸುವರು ಎಂಬುದು ಮುಖ್ಯವಲ್ಲ. ಈಶ್ವರಪ್ಪ, ವಿಶ್ವನಾಥ್ ಅಥವಾ ಸ್ವಾಮೀಜಿ ಯಾರಾದರೂ ಇರಲಿ. ಆದರೆ, ಈ ಹೋರಾಟದ ಅಗತ್ಯ ಇದೆಯೇ? ಬೀದಿ ಹೋರಾಟ ಏಕೆ ಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ಪ್ರಶ್ನಿಸಿದರು.</p>.<p>‘ನಾವು ದೇವರನ್ನೇ ಏಕವಚನದಲ್ಲಿ ಕರೆಯುತ್ತೇವೆ. ಯಾರಾದರೂ ದೇವರನ್ನು ಬಹುವಚನದಲ್ಲಿ ಕರೆಯೋದನ್ನು ನೋಡಿದ್ದೀರಾ?’ ಎಂದು ಅವರು ವಿಶ್ವನಾಥ್ಗೆ ತಿರುಗೇಟು ನೀಡಿದರು.</p>.<p>‘ಇವನು ಏಕವಚನದಲ್ಲಿ ಎಷ್ಟು ಸಲ ಮಾತನಾಡಿದ್ದಾನೆ ಎಂಬುದನ್ನು ತೋರಿಸಲಾ? ಕೆ.ಆರ್.ನಗರ ಶಾಸಕರ ವಿರುದ್ಧ ಇವ ಯಾವ ಭಾಷೆಯಲ್ಲಿ ಮಾತನಾಡಿದ್ದ? ನಾನು ಉದ್ದೇಶಪೂರ್ವಕವಾಗಿ ಏಕವಚನದಲ್ಲಿ ಮಾತನಾಡುವುದಿಲ್ಲ ಎಂದರು.</p>.<p class="Briefhead"><strong>ಜಿಟಿಡಿಗೆ ಕೊಟ್ಟಿದ್ದು ಎಷ್ಟು ಕೋಟಿ?</strong></p>.<p>ಹುಣಸೂರು ಉಪ ಚುನಾವಣೆ ಖರ್ಚಿಗಾಗಿ ಮುಖ್ಯಮಂತ್ರಿ ನೀಡಿದ್ದ ಹಣವನ್ನು ಸಿ.ಪಿ.ಯೋಗೇಶ್ವರ್, ಎನ್.ಆರ್.ಸಂತೋಷ್ ಎತ್ತಿಕೊಂಡು ಹೋದರು ಎಂಬ ತಮ್ಮ ಹೇಳಿಕೆಗೆ ಈಗಲೂ ಬದ್ಧ ಎಂದ . ವಿಶ್ವನಾಥ್, ‘ನನ್ನ ಹೇಳಿಕೆಯಂತೆ ದೊಡ್ಡ ಮೊತ್ತ ಎಂದರೆ ₹ 5 ಲಕ್ಷವಷ್ಟೆ’ ಎಂದರು.</p>.<p>‘ದೊಡ್ಡ ಮೊತ್ತ ಎಂದರೆ, ಮುಖ್ಯಮಂತ್ರಿಯಾಗಿದ್ದ ನಿಮಗೆ ಹಲವು ಕೋಟಿಗಳು. ನೀವೇ ಹೇಳಿದಂತೆ ಶಾಸಕ ಜಿ.ಟಿ.ದೇವೇಗೌಡರಿಗೆ ನೀವು ಕೊಟ್ಟ ಹಣ ಎಷ್ಟು ಕೋಟಿ? ಅದು ಬಿಳಿಯೋ? ಕಪ್ಪೋ? ಎಂಬುದನ್ನು ಬಹಿರಂಗಪಡಿಸಿ’ ಎಂದರು.</p>.<p class="Briefhead"><strong>‘ಜಂಗಲ್ ಸಂಸ್ಕೃತಿ’ಯ ಸಿದ್ದರಾಮಯ್ಯ</strong></p>.<p><strong>ಬೆಂಗಳೂರು: </strong>‘ಲವ್ ಜಿಹಾದ್’ ತಡೆಗೆ ಕಾಯ್ದೆ ತರಲು ಸರ್ಕಾರ ಮುಂದಾಗಿರುವ ಬಗ್ಗೆ ಸಿದ್ದರಾಮಯ್ಯ ನೀಡಿರುವ ಬೇಜವಾಬ್ದಾರಿ ಹೇಳಿಕೆಯು ಜಂಗಲ್ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಹೇಳಿದ್ದಾರೆ.</p>.<p>ಹಿಂದೂ ಮಹಿಳೆಯರನ್ನು ‘ಲವ್ ಜಿಹಾದ್’ ಮೂಲಕ ಮತಾಂತರಗೊಳಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಅನಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ಕಾನೂನು ರೂಪಿಸುತ್ತಿದೆ. ‘ಕ್ರಾಸ್ ಬ್ರೀಡ್’ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>