ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧವನ್ನು 2012ರ ಅ.11ರಂದು ಉದ್ಘಾಟಿಸಿದ್ದ ಅಂದಿನ ರಾಷ್ಟ್ರಪತಿ ಪ್ರವಣ್ ಮುಖರ್ಜಿ ಅವರು, ಕಟ್ಟಡದ ವಾಸ್ತುಶಿಲ್ಪ ಹಾಗೂ ವಿನ್ಯಾಸಕ್ಕೆ ಮನ ಸೋತಿದ್ದರು.
ಬಳಿಕ ಅಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಆಗ, ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದರು.
ಅಂದೇ ಡಾ.ಚಂದ್ರಶೇಖರ ಕಂಬಾರ ಅವರಿಗೆ ಇಲ್ಲಿ ಜ್ಞಾನಪೀಠ ಪುರಸ್ಕಾರವನ್ನೂ ಪ್ರದಾನ ಮಾಡಿದ್ದರು. ರಿಸಾಲ್ದಾರ್ ಗಲ್ಲಿಯಲ್ಲಿ ಸ್ವಾಮಿ ವಿವೇಕಾನಂದರು ವಾಸ್ತವ್ಯ ಹೂಡಿದ್ದ ಮನೆಯ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
ಇದಕ್ಕೂ ಮುನ್ನ, ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ವಿಟಿಯು ಘಟಿಕೋತ್ಸವದಲ್ಲಿ ಪಾಲ್ಗೊಂಡು, ಪ್ರಮುಖ ಭಾಷಣ ಮಾಡಿದ್ದರು.