ಮೀನು ಬೇಟೆಗೆ ಬರುತ್ತಿದ್ದ ಹಕ್ಕಿಗಳಿಗೂ ಆಹಾರವಿಲ್ಲದಂತಾಗಿದೆ ಎಂದು ಅವರು ತಿಳಿಸಿದರು.
ನೂರಾರು ಎಕರೆ ಸುತ್ತಳತೆಯನ್ನು ಹೊಂದಿರುವ ಮುತ್ಕೂರು ಕೆರೆ ಹೊಸಕೋಟೆ ವ್ಯಾಪ್ತಿಗೆ ಸೇರಿದ್ದು, ಶುದ್ಧ ಮಳೆ ನೀರಿನಿಂದ ತುಂಬಿದೆ. ಆದರೆ ಇತ್ತೀಚೆಗೆ ಕೆರೆಯ ನೀರನ್ನು ಕೆಲ ರೈತರು ತಮ್ಮ ತೋಟಗಳಿಗೆ ಬಳಸುತ್ತಿದ್ದಾರೆ. ಇದರಿಂದಾಗಿ ಕೆರೆಯ ನೀರು ಕಡಿಮೆ ಆಗಿದೆ.
ಕೆರೆಗೆ ಕಲ್ಮಶ: ಮುತ್ಕೂರು ಕೆರೆಗೆ ಕೋಳಿ ಮಾಂಸದ ಅಂಗಡಿಗಳ ಮಾಲೀಕರು ದಿನವೂ ಸಂಜೆಯಾಗುತ್ತಲೇ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದು ದುರ್ವಾಸನೆಗೆ ಕಾರಣವಾಗಿದೆ. ಈ ಕುರಿತು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.