ಅತ್ತೆ– ಸೊಸೆ ಪ್ರಶ್ನೆ ಇಲ್ಲ: ‘ಗೃಹ ಲಕ್ಷ್ಮಿ ಯೋಜನೆಯಡಿ ಮಾಧ್ಯಮಗಳಲ್ಲಿ ಬಿಂಬಿಸಿದಂತೆ ಅತ್ತೆ– ಸೊಸೆ ಪ್ರಶ್ನೆ ಉದ್ಭವಿಸುವುದಿಲ್ಲ. ಮನೆ ಯಜಮಾನಿಯನ್ನು ಮನೆಯವರೇ ತೀರ್ಮಾನಿಸಿಕೊಳ್ಳಬೇಕು. ಯಾರ ಖಾತೆಗೆ ಹಣ ಪಾವತಿ ಮಾಡಬೇಕು ಎಂಬುದನ್ನೂ ಅವರೇ ತೀರ್ಮಾನಿಸಿ ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಕೊಡಬೇಕು’ ಎಂದು ಸಿದ್ದರಾಮಯ್ಯ ತಿಳಿಸಿದರು.
‘ನಮ್ಮದು ನುಡಿದಂತೆ ನಡೆದ ಸರ್ಕಾರ. ನಮ್ಮ ಯೋಜನೆಗಳ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಅಧಿಕಾರವಿಲ್ಲ. ಅವರ ಸರ್ಕಾರ ಇದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ’ ಎಂದು ಪ್ರಶ್ನಿಸಿದರು.
ವಿದ್ಯುತ್ ಬಿಲ್ಗೆ ಸಂಬಂಧಿಸಿದಂತೆ ಹಳೆಯ ಬಾಕಿಗಳನ್ನೆಲ್ಲಾ ಪಾವತಿಸಬೇಕು ಎಂದೂ ಅವರು ಹೇಳಿದರು.