ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯನ್ನು ಭಕ್ತರು ಸಾಕ್ಷತ್ ಶಿವನೇ ನುಡಿಯುವ ಭವಿಷ್ಯವಾಣಿ ಎಂದು ನಂಬುತ್ತಾರೆ. ಪ್ರಚಲಿತ ವರ್ಷದ ಮಳೆ, ಬೆಳೆ, ವಾಣಿಜ್ಯ ವ್ಯವಹಾರ, ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿಗತಿಗಳಿಗೆ ಹೋಲಿಕೆ ಮಾಡುತ್ತಾರೆ. ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಕಾರಣಿಕ ನುಡಿಯನ್ನು ಸ್ಪಷ್ಟವಾಗಿ ಕೇಳಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿರುವುದಾಗಿ ತಿಳಿಸಿದರು.