ಜುಲೈ 28ರ ‘ಪ್ರಜಾವಾಣಿ’ ಸಂಚಿಕೆಯಲ್ಲಿ ‘ಅಪಾಯದ ಭೀತಿಯಲ್ಲಿ 23 ಕುಟುಂಬಗಳು’ ಶೀರ್ಷಿಕೆ ಅಡಿ ಗ್ರಾಮದ ಸ್ಥಿತಿಗತಿ ಕುರಿತು ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ಬೆನ್ನಲೇ ಸುಂಟಿಕೊಪ್ಪದ ನಾಡು ಕಚೇರಿಯ ಉಪ ತಹಶೀಲ್ದಾರ್ ರೋಹಿತ್, ಕಂದಾಯ ಪರಿವೀಕ್ಷಕ ಶಿವಪ್ಪ, ಗ್ರಾಮ ಲೆಕ್ಕಿಗರಾದ ನಾಗೇಂದ್ರ, ಡಾಪ್ನ ಅವರು ಅಪಾಯದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೆದಕಲ್ ಗ್ರಾ.ಪಂ ಸೂಚಿಸಿದ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ.