‘ರಾಜ್ಯದಲ್ಲಿ ಅತಿ ದೊಡ್ಡ ಜಲಕ್ಷಾಮ ತಲೆದೋರಿದೆ. ಆದರೆ, ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮನೆ ಮುಂದೆ ಗಿಡಗಳಿಗೆ ನೀರು ಹಾಕಬೇಡಿ, ಕಾರು ತೊಳೀಬೇಡಿ ಎನ್ನುವ ಸುತ್ತೋಲೆ ಹೊರಡಿಸಿದ್ದಾರೆ. ಇನ್ನು ಸ್ವಲ್ಪ ದಿನ ಕಳೆದರೆ ಇನ್ನೇನು ತೊಳೀಬೇಡಿ ಎನ್ನುತ್ತಾರೋ ಗೊತ್ತಿಲ್ಲ’ ಎಂದು ರಾಜೀವ್ ವ್ಯಂಗ್ಯವಾಡಿದರು.