ಕಂದಾಯ ಇಲಾಖೆಯಲ್ಲಿ ಮೌನ ಕ್ರಾಂತಿ
ಒಂದು ಪೋಡಿ ದುರಸ್ತಿಗೆ ಒಂದು ಎಕರೆಗೆ ₹50 ಸಾವಿರದಿಂದ ₹5 ಲಕ್ಷ, ₹10 ಲಕ್ಷ ಖರ್ಚಾಗುತ್ತದೆ ಎಂದು ರೈತರು ಹೇಳಿದ್ದನ್ನು ಕೇಳಿದ್ದೇನೆ. ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳು ಜನರನ್ನು ಶೋಷಿಸುತ್ತಿದ್ದರು. ಮಧ್ಯವರ್ತಿಗಳಿಗೆ ಹಣ ಕೊಟ್ಟರೆ ಕೆಲಸ ಆಗುತ್ತದೆ ಎನ್ನುವ ಸ್ಥಿತಿ ಇತ್ತು. ಆದರೆ ಈ ವ್ಯವಸ್ಥೆ ಬದಲಿಸಿ ಕಂದಾಯ ಇಲಾಖೆಯಲ್ಲಿ ಮೌನಕ್ರಾಂತಿ ಮಾಡಲಾಗುತ್ತಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ನಕಲಿ ದಾಖಲೆಗಳನ್ನು ಸೃಷ್ಟಿಸಿ ರೆಕಾರ್ಡ್ ರೂಂನಲ್ಲಿ ಇಟ್ಟಿದ್ದಾರೆ. ಹೀಗೆ ನಕಲು, ಫೋರ್ಜರಿ ತಡೆಗೆ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡುತ್ತಿದ್ದೇವೆ. ಈಗ 71 ಕೋಟಿ ಪುಟಗಳು ಸ್ಕ್ಯಾನಿಂಗ್ ಆಗಿವೆ ಎಂದರು.