ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕೇಂದ್ರದ ಪ್ರಾಧ್ಯಾಪಕ ಡಾ.ಶಿವಕುಮಾರ್ ಹರಗಿ, ‘ಈ ಜಲಚರ ಬಹಳ ವಿಷಕಾರಿ. ಇದರ ವಿಷ ತಾಗಿದರೆ ಮನುಷ್ಯರಿಗೆ ವಾಂತಿ, ತುರಿಕೆ, ಕಜ್ಜಿಹಾಗೂ ನರ ದೌರ್ಬಲ್ಯವೂ ಉಂಟಾಗಬಹುದು. ವಿಷದ ಪ್ರಮಾಣ ಹೆಚ್ಚಾದರೆ ಸ್ಪರ್ಶಿಸಿದವರು ಸಾಯುವಅಪಾಯವೂಇದೆ. ಹಾಗಾಗಿ ಅದನ್ನು ಯಾವುದೇ ಕಾರಣಕ್ಕೂ ಸ್ಪರ್ಶಿಸಲೇಬಾರದು’ ಎಂದು ಅವರುಎಚ್ಚರಿಕೆ ನೀಡಿದ್ದಾರೆ.