ರಾಘವೇಂದ್ರ ಔರಾದ್ಕರ್ ಸಮಿತಿ ಶಿಫಾರಸಿನಂತೆ ಪೊಲೀಸ್ ಸಿಬ್ಬಂದಿಯ ಮೂಲ ವೇತನದಲ್ಲಿ ಶೇಕಡ 30ರಿಂದ 35ರಷ್ಟು ಹೆಚ್ಚಳ ಮಾಡಬೇಕ. ಎಲ್ಲರಿಗೂ ತಿಂಗಳಿಗೆ ₹ 3,600 ವಿಶೇಷ ಭತ್ಯೆ ಮಂಜೂರು ಮಾಡಬೇಕು. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಸಕ್ರಿಯರಾಗಿರುವ ಎಲ್ಲ ಎಎಸ್ಐ, ಎಚ್ಸಿ ಮತ್ತು ಪಿಸಿಗಳಿಗೆ 2020ರ ಮಾರ್ಚ್ನಿಂದ ತಿಂಗಳಿಗೆ ₹ 5,000 ಕಷ್ಟ ಪರಿಹಾರ ಭತ್ಯೆ ಮಂಜೂರು ಮಾಡಬೇಕು. 2020ರ ಜನವರಿಯಿಂದ ತಡೆ ಹಿಡಿದಿರುವ ತುಟ್ಟಿಭತ್ಯೆಯನ್ನು ಹಿಂಬಾಕಿ ಸಹಿತವಾಗಿ ಪಾವತಿ ಮಾಡಬೇಕು. ಪೊಲೀಸ್ ಕಾನ್ಸ್ಟೆಬಲ್ಗಳಿಗೆ ನೀಡುತ್ತಿರುವ ಪಡಿತರ ಭತ್ಯೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗಳು ಮನವಿ ಪತ್ರದಲ್ಲಿವೆ.