‘ಇಂತಹ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಕಸ್ಟಮ್ಸ್ ತಪಾಸಣೆ ವ್ಯವಸ್ಥೆ ವಿಕೇಂದ್ರೀಕರಣ ಮಾಡಬೇಕಾಗಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಂದರು ಇರುವ ಮಂಗಳೂರಿನಿಂದ ದೊಡ್ಡ ಪ್ರಮಾಣದಲ್ಲಿ ರಫ್ತು, ಆಮದು ನಡೆಯುತ್ತದೆ. ಹೀಗಾಗಿ ಮಂಗಳೂರು, ಹುಬ್ಬಳ್ಳಿ, ಕಲಬುರ್ಗಿಗಳಲ್ಲಿ ಒಬ್ಬ ಕಸ್ಟಮ್ಸ್ ತಪಾಸಣಾ ಅಧಿಕಾರಿ ನಿಯೋಜಿಸಿದರೆ ಅನುಕೂಲವಾಗಲಿದೆ’ ಎಂದರು.