ಬರ ಪರಿಹಾರಕ್ಕಾಗಿ ಎನ್ಡಿಆರ್ಎಫ್ನಡಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಹೆಚ್ಚಿನ ಅನುದಾನ ನೀಡಲಾಗಿದೆ. 2009-14ರ ಯುಪಿಎ ಎರಡನೇ ಅವಧಿಯಲ್ಲಿ ರಾಜ್ಯ ಸರ್ಕಾರ ₹29,097 ಕೋಟಿ ಕೇಳಿತ್ತು. ₹3,297 ಕೋಟಿಯನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಇದು ಬೇಡಿಕೆ ಸಲ್ಲಿಸಿದ ಶೇ 10ರಷ್ಟು ಮೊತ್ತ ಮಾತ್ರ. ಎನ್ಡಿಎ ಆಡಳಿತದ 2014–24ರ ಅವಧಿಯಲ್ಲಿ ಸುಮಾರು ₹63,440 ಕೋಟಿಯಷ್ಟು ಪರಿಹಾರವನ್ನು ರಾಜ್ಯ ಸರ್ಕಾರ ಕೇಳಿದ್ದು, ₹13,378 ಕೋಟಿ ನೀಡಲಾಗಿದೆ ಎಂದು ಜೋಶಿ ಹೇಳಿದರು.