ಹುಬ್ಬಳ್ಳಿ: ‘ಭಗವದ್ಗೀತೆಯನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವುದರಲ್ಲಿ ತಪ್ಪೇನು ಇಲ್ಲ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಬಾರದು’ ಎಂದುಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಿಚಾರದಲ್ಲಿ ಜಾತಿವಾದಿಗಳು, ಹುಸಿ ಜಾತ್ಯತೀತವಾದಿಗಳು ವಾದ ಮಾಡಬಾರದು. ಎಲ್ಲರೂ ಈ ನಿರ್ಧಾರ ಸ್ವಾಗತಿಸಬೇಕು’ ಎಂದು ಅವರು ಹೇಳಿದರು.
‘ಸಮಾಜದಲ್ಲಿ ಈಚೆಗೆ ನೈತಿಕ ಶಿಕ್ಷಣ ಕಡಿಮೆ ಆಗುತ್ತಿದೆ. ನಮ್ಮ ಮಕ್ಕಳಿಗೆ ನೈತಿಕತೆ, ಇತಿಹಾಸ ಹಾಗೂ ಧರ್ಮದ ಬೋಧನೆ ಆಗಬೇಕಿದೆ. ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದರಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಲಭಿಸಲಿದೆ’ ಎಂದರು.