‘ಆರೋಪಿ ಯುವಕ, ಮದ್ಯಪಾನ, ಧೂಮಪಾನ ಮಾಡಿ, ಸ್ನೇಹಿತರಿಗೂ ದುಶ್ಚಟ ಮಾಡುವಂತೆ ಪ್ರಚೋದಿಸುತ್ತಿದ್ದ. ರಸ್ತೆಯಲ್ಲಿ ಹೊರಟಿದ್ದ ಯುವಕನನ್ನು ತಡೆದಿದ್ದ ಅಜೀಂವುಲ್ಲಾ, ‘ಸ್ನೇಹಿತರನ್ನು ಹಾಳು ಮಾಡಬೇಡಿ’ ಎಂದು ಬುದ್ಧಿವಾದ ಹೇಳಿ ಕಪಾಳಕ್ಕೆ ಹೊಡೆದಿದ್ದರು. ಸಿಟ್ಟಾಗಿದ್ದ ಯುವಕ, ಮನೆಗೆ ಹೋಗಿ ತನ್ನ ತಂದೆ ಕರೆದುಕೊಂಡು ಬಂದಿದ್ದ. ಅದೇ ಸಂದರ್ಭದಲ್ಲೇ ಯುವಕ, ತನ್ನ ಬಳಿಯ ಚಾಕುವಿನಿಂದ ಅಜೀಂವುಲ್ಲಾ ಎದೆಗೆ ಇರಿದಿದ್ದ’ ಎಂದೂ ಮೂಲಗಳು ಹೇಳಿವೆ.