ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2 ತಿಂಗಳ ಹಿಂದೆಯೇ ಸಚಿವ ಸ್ಥಾನದ ಆಫರ್ ಕೊಟ್ಟಿದ್ದರು. ಮುಖ್ಯಮಂತ್ರಿ ಆಫರ್ ಕೊಟ್ಟರೂ ಸುಮ್ಮನಾಗುವುದಿಲ್ಲ. ನಮ್ಮ ಸರ್ಕಾರ ಅಲುಗಾಡಿಸುವುದನ್ನುಬಿಡುವುದಿಲ್ಲ. ಅವರು ಕಾಂಗ್ರೆಸ್ ಪಕ್ಷದಿಂದ ಕಾಲು ಹೊರಗಿಟ್ಟು ಬಹಳ ದಿನಗಳೇ ಆಗಿವೆ. ಹೀಗಾಗಿ, ಅವರ ಮನವೊಲಿಸುವುದನ್ನು ಬಿಟ್ಟು ಬಿಡಿ ಎಂದು ಮುಖ್ಯಮಂತ್ರಿಗೆ ಶುಕ್ರವಾರ ತಿಳಿಸಿದ್ದೇನೆ ಎಂದು ಹೇಳಿದರು.