ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ,‘ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ ಹೋದಾಗ ಭಾರತದಲ್ಲಿ ಅಸಾಂಪ್ರದಾಯಿಕ ಇಂಧನಗಳ ಬಳಕೆಗೆ ಹೆಚ್ಚು ಆದ್ಯತೆ ಕೊಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಅಣು ವಿದ್ಯುತ್ ಸ್ಥಾವರದಂತಹ ಯೋಜನೆಗಳು ಮುಂದುವರಿಯುತ್ತಿವೆ. ಇಂಥ ವ್ಯತಿರಿಕ್ತಗಳು ಯಾಕೆ?ನವೀಕರಿಸಬಹುದಾದ ಇಂಧನಗಳ ಬಗ್ಗೆ ಈ ಕಾಳಜಿ ಇರುವಂತೆ ಮಾತನಾಡುತ್ತಿರುವ ಈಗಿನ ಪ್ರಧಾನಿಯ ಅವಧಿಯಲ್ಲೇ ಕೈಗಾ ಯೋಜನೆಯ ವಿಸ್ತರಣೆಯನ್ನು ವಿರೋಧಿಸಬೇಕು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.