ಬೆಂಗಳೂರು:ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನೆ ‘ಕಾವೇರಿ’ಗೆ ಅತೃಪ್ತ ಸಚಿವ ಎಂಟಿಬಿ ನಾಗರಾಜ್ ಅವರನ್ನು ಡಿ.ಕೆ.ಶಿವಕುಮಾರ್ ಕರೆತಂದರು.
ಸಿದ್ದರಾಮಯ್ಯ ಮನೆಯೊಳಗೆ ಎಂಟಿಬಿ ಪ್ರವೇಶಿಸಿದ ನಂತರ ಸುಧಾಕರ್ ಅವರನ್ನು ಹುಡುಕಿ, ಕರೆತರಲು ಹೊರಟರು. ‘ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾಗಿ ಮನವೊಲಿಸಲು ಯತ್ನಿಸಿದೆ. ಉಳಿದೆಲ್ಲ ಅತೃಪ್ತರ ಮನವೊಲಿಸಲು ಯತ್ನಿಸುತ್ತೇನೆ’ ಎಂದು ಶಿವಕುಮಾರ್ ಹೇಳಿದರು.