ಪೊಲೀಸ್ ಕಮಿಷನರ್ ಸತೀಶ ಕುಮಾರ್ ಎನ್. ಅವರನ್ನು ಇತ್ತೀಚೆಗೆ ಖುದ್ದು ಭೇಟಿ ಮಾಡಿದ ಅವರು, ‘ಸಿಬ್ಬಂದಿ ನೇಮಕಾತಿ, ಶಿಕ್ಷಕೇತರ ಸಿಬ್ಬಂದಿಯ ಆಂತರಿಕ ವರ್ಗಾವಣೆಗೆ ಸಂಬಂಧಿಸಿದಂತೆ ಒತ್ತಡ ಹೇರ ಲಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಸಂಬಂಧಪಡದ ವ್ಯಕ್ತಿಗಳು ಬಂದು ದೈನಂದಿನ ಆಡಳಿ ತಾತ್ಮಕ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ನನಗೆ ಸಮರ್ಪಕವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಒಟ್ಟಾರೆ ಬೆಳವಣಿಗೆ ಗಳಿಂದ ನನಗೆ ಜೀವ ಭಯವಿದೆ. ತುರ್ತಾಗಿ ರಕ್ಷಣೆ ನೀಡಬೇಕು’ ಎಂದು ಅವರು ಕೋರಿದ್ದಾರೆ.