<p><strong>ಬೆಂಗಳೂರು:</strong> ‘ಆದಾಯ ತೆರಿಗೆ ಇಲಾಖೆಗೆ ಯಡಿಯೂರಪ್ಪ ಅವರ ಡೈರಿ ಸಿಕ್ಕಿದ್ದೇ ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ. ನಾವು (ಕ್ಯಾರವಾನ್ ವರದಿಗಾರರು) ಈ ಡೈರಿಯ ಹಾಳೆಗಳನ್ನು ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿದೆವು. ಅವರು ‘ಈ ಪುಟಗಳನ್ನು ನನ್ನ ಮನೆಯಿಂದ ಆಗಸ್ಟ್ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು’ ಎಂದು ಒಪ್ಪಿಕೊಂಡರು. ಆದರೆ ಹೆಚ್ಚೇನೂ ಮಾತನಾಡಲಿಲ್ಲ’ ಎಂದು ‘ಕ್ಯಾರವಾನ್’ ವರದಿ ಉಲ್ಲೇಖಿಸಿದೆ.</p>.<p>‘ಬಿಜೆಪಿಯಿಂದ ದೂರವಾಗಿ ಕೆಜೆಪಿಗೆ ಮರುಜೀವ ಕೊಡುವ ಪ್ರಯತ್ನದಲ್ಲಿದ್ದಾಗ ಯಡಿಯೂರಪ್ಪ ಈ ಡೈರಿ ಬರೆದಿದ್ದಾರೆ. ಈ ವೇಳೆ ಅನಂತಕುಮಾರ್ (2018ರಲ್ಲಿ ನಿಧನರಾದರು),ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಯಡಿಯೂರಪ್ಪ ಸಂಬಂಧ ಹಳಸಿತ್ತು. ವಿರೋಧಿಗಳ ಸುಪರ್ದಿಯಲ್ಲಿರುವ ದಾಖಲೆಗಳನ್ನು ಪಡೆದುಕೊಳ್ಳಲು ಈ ನಾಯಕರು ಹಾತೊರೆಯುತ್ತಿದ್ದರು. ಈ ಹಂತದಲ್ಲಿ ಯಡಿಯೂರಪ್ಪ ಅವರ ಖಾಸಗಿ ಸಿಬ್ಬಂದಿಗೆ ದೊರೆತ ಈ ಡೈರಿ ನಂತರದ ದಿನಗಳಲ್ಲಿ ಅನಂತಕುಮಾರ್ ಸೇರಿ ಹಲವು ಹಿರಿಯ ನಾಯಕರ ಕೈ ಸೇರಿತು’ ಎಂದು ಅಧಿಕಾರಿಗಳ ಟಿಪ್ಪಣಿಯನ್ನು ಆಧರಿಸಿ ‘ಕ್ಯಾರವಾನ್’ ವರದಿ ಉಲ್ಲೇಖಿಸಿದೆ.</p>.<p>‘ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಇತರರಿಗೆ ಈ ಡೈರಿಯ ಪ್ರತಿಗಳನ್ನು ಒದಗಿಸಲಾಯಿತು. ಯಡಿಯೂರಪ್ಪ ಅವರೊಡನೆ ಸಂಬಂಧ ಚೆನ್ನಾಗಿದ್ದ ಕಾರಣ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಈ ಡೈರಿಯ ಬಗ್ಗೆ ಮಾಹಿತಿ ಕೊಡಲಿಲ್ಲ’ ಎಂದು ಅಧಿಕಾರಿಗಳ ಟಿಪ್ಪಣಿ ಹೇಳಿರುವುದಾಗಿ ‘ಕ್ಯಾರವಾನ್’ ವರದಿ ಹೆಳಿದೆ.</p>.<p>‘ಆದಾಯ ತೆರಿಗೆ ಇಲಾಖೆಯ ದಾಳಿ ಮತ್ತು ವಶಪಡಿಸಿಕೊಂಡ ದಾಖಲೆಗಳ ಸಮಗ್ರ ಮಾಹಿತಿ ಇರುವ ಕರ್ನಾಟಕದ ಹಿರಿಯ ರಾಜಕಾರಿಣಿಯೊಬ್ಬರು ‘ಇದು ನೂರಕ್ಕೆ ನೂರರಷ್ಟು ಯಡಿಯೂರಪ್ಪ ಅವರೇ ಬರೆದದ್ದು. ಯಾವುದೇ ಅನುಮಾನ ಬೇಡ’ ಎಂದು ದೃಢೀಕರಿಸಿದರು’ ಎಂದು ಕ್ಯಾರವಾನ್ ಹೇಳಿದೆ.</p>.<p><strong>ಇನ್ನಷ್ಟು ಸುದ್ದಿಗಳು<br />*</strong><a href="https://www.prajavani.net/stories/stateregional/yediyurappa-paid-money-bjp-622948.html" target="_blank">ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ಲಂಚ ಕೊಟ್ಟ ಯಡಿಯೂರಪ್ಪ</a><br />*<a href="https://www.prajavani.net/stories/stateregional/shobha-yeddyurappa-marriage-622955.html" target="_blank">ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ</a><br />*<a href="https://www.prajavani.net/stories/national/bs-yeddiyurappa-reaction-622966.html" target="_blank">ಯಡಿಯೂರಪ್ಪ ಪ್ರತಿಕ್ರಿಯೆ– ಕಾಂಗ್ರೆಸ್ನದ್ದು ಯುದ್ಧ ಶುರುವಾಗುವ ಮುನ್ನವೇ ಸೋತ ಪರಿಸ್ಥಿತಿ</a><br />*<a href="https://www.prajavani.net/stories/national/yeddyurappa-diaries-congress-622954.html" target="_blank">ಕೇಂದ್ರ ನಾಯಕರಿಗೆ ₹1800 ಕೋಟಿ ಪಾವತಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಆದಾಯ ತೆರಿಗೆ ಇಲಾಖೆಗೆ ಯಡಿಯೂರಪ್ಪ ಅವರ ಡೈರಿ ಸಿಕ್ಕಿದ್ದೇ ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ. ನಾವು (ಕ್ಯಾರವಾನ್ ವರದಿಗಾರರು) ಈ ಡೈರಿಯ ಹಾಳೆಗಳನ್ನು ಡಿ.ಕೆ.ಶಿವಕುಮಾರ್ ಅವರಿಗೆ ತೋರಿಸಿದೆವು. ಅವರು ‘ಈ ಪುಟಗಳನ್ನು ನನ್ನ ಮನೆಯಿಂದ ಆಗಸ್ಟ್ 2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡರು’ ಎಂದು ಒಪ್ಪಿಕೊಂಡರು. ಆದರೆ ಹೆಚ್ಚೇನೂ ಮಾತನಾಡಲಿಲ್ಲ’ ಎಂದು ‘ಕ್ಯಾರವಾನ್’ ವರದಿ ಉಲ್ಲೇಖಿಸಿದೆ.</p>.<p>‘ಬಿಜೆಪಿಯಿಂದ ದೂರವಾಗಿ ಕೆಜೆಪಿಗೆ ಮರುಜೀವ ಕೊಡುವ ಪ್ರಯತ್ನದಲ್ಲಿದ್ದಾಗ ಯಡಿಯೂರಪ್ಪ ಈ ಡೈರಿ ಬರೆದಿದ್ದಾರೆ. ಈ ವೇಳೆ ಅನಂತಕುಮಾರ್ (2018ರಲ್ಲಿ ನಿಧನರಾದರು),ಈಶ್ವರಪ್ಪ ಸೇರಿದಂತೆ ಹಲವು ಹಿರಿಯ ನಾಯಕರೊಂದಿಗೆ ಯಡಿಯೂರಪ್ಪ ಸಂಬಂಧ ಹಳಸಿತ್ತು. ವಿರೋಧಿಗಳ ಸುಪರ್ದಿಯಲ್ಲಿರುವ ದಾಖಲೆಗಳನ್ನು ಪಡೆದುಕೊಳ್ಳಲು ಈ ನಾಯಕರು ಹಾತೊರೆಯುತ್ತಿದ್ದರು. ಈ ಹಂತದಲ್ಲಿ ಯಡಿಯೂರಪ್ಪ ಅವರ ಖಾಸಗಿ ಸಿಬ್ಬಂದಿಗೆ ದೊರೆತ ಈ ಡೈರಿ ನಂತರದ ದಿನಗಳಲ್ಲಿ ಅನಂತಕುಮಾರ್ ಸೇರಿ ಹಲವು ಹಿರಿಯ ನಾಯಕರ ಕೈ ಸೇರಿತು’ ಎಂದು ಅಧಿಕಾರಿಗಳ ಟಿಪ್ಪಣಿಯನ್ನು ಆಧರಿಸಿ ‘ಕ್ಯಾರವಾನ್’ ವರದಿ ಉಲ್ಲೇಖಿಸಿದೆ.</p>.<p>‘ಸೂಕ್ತ ಸಮಯದಲ್ಲಿ, ಸೂಕ್ತ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸುವಂತೆ ಸೂಚಿಸಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಮತ್ತು ಇತರರಿಗೆ ಈ ಡೈರಿಯ ಪ್ರತಿಗಳನ್ನು ಒದಗಿಸಲಾಯಿತು. ಯಡಿಯೂರಪ್ಪ ಅವರೊಡನೆ ಸಂಬಂಧ ಚೆನ್ನಾಗಿದ್ದ ಕಾರಣ ಡಿ.ಕೆ.ಶಿವಕುಮಾರ್ ಮಾಧ್ಯಮಗಳಿಗೆ ಈ ಡೈರಿಯ ಬಗ್ಗೆ ಮಾಹಿತಿ ಕೊಡಲಿಲ್ಲ’ ಎಂದು ಅಧಿಕಾರಿಗಳ ಟಿಪ್ಪಣಿ ಹೇಳಿರುವುದಾಗಿ ‘ಕ್ಯಾರವಾನ್’ ವರದಿ ಹೆಳಿದೆ.</p>.<p>‘ಆದಾಯ ತೆರಿಗೆ ಇಲಾಖೆಯ ದಾಳಿ ಮತ್ತು ವಶಪಡಿಸಿಕೊಂಡ ದಾಖಲೆಗಳ ಸಮಗ್ರ ಮಾಹಿತಿ ಇರುವ ಕರ್ನಾಟಕದ ಹಿರಿಯ ರಾಜಕಾರಿಣಿಯೊಬ್ಬರು ‘ಇದು ನೂರಕ್ಕೆ ನೂರರಷ್ಟು ಯಡಿಯೂರಪ್ಪ ಅವರೇ ಬರೆದದ್ದು. ಯಾವುದೇ ಅನುಮಾನ ಬೇಡ’ ಎಂದು ದೃಢೀಕರಿಸಿದರು’ ಎಂದು ಕ್ಯಾರವಾನ್ ಹೇಳಿದೆ.</p>.<p><strong>ಇನ್ನಷ್ಟು ಸುದ್ದಿಗಳು<br />*</strong><a href="https://www.prajavani.net/stories/stateregional/yediyurappa-paid-money-bjp-622948.html" target="_blank">ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ಲಂಚ ಕೊಟ್ಟ ಯಡಿಯೂರಪ್ಪ</a><br />*<a href="https://www.prajavani.net/stories/stateregional/shobha-yeddyurappa-marriage-622955.html" target="_blank">ಯಡಿಯೂರಪ್ಪ–ಶೋಭಾ ಮದುವೆ ಕಥೆಯೂ ಡೈರಿಯಲ್ಲಿದೆ</a><br />*<a href="https://www.prajavani.net/stories/national/bs-yeddiyurappa-reaction-622966.html" target="_blank">ಯಡಿಯೂರಪ್ಪ ಪ್ರತಿಕ್ರಿಯೆ– ಕಾಂಗ್ರೆಸ್ನದ್ದು ಯುದ್ಧ ಶುರುವಾಗುವ ಮುನ್ನವೇ ಸೋತ ಪರಿಸ್ಥಿತಿ</a><br />*<a href="https://www.prajavani.net/stories/national/yeddyurappa-diaries-congress-622954.html" target="_blank">ಕೇಂದ್ರ ನಾಯಕರಿಗೆ ₹1800 ಕೋಟಿ ಪಾವತಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>