ಪ್ರಥಮ ಬಹುಮಾನ ಶಿವಮೊಗ್ಗ ಜಿಲ್ಲೆಯ ಶಂಕರಘಟ್ಟದ ಡಾ. ನೆಲ್ಲಿಕಟ್ಟೆ ಸಿದ್ಧೇಶ್ ಮತ್ತು ದಾವಣಗೆರೆಯ ಸದಾಶಿವ ಸೊರಟೂರ ಅವರಿಗೆ ಲಭಿಸಿದೆ. ದ್ವಿತೀಯ ಬಹುಮಾನ ತುಮಕೂರು ಜಿಲ್ಲೆಯ ಯರವರಹಳ್ಳಿಯ ಶ್ರೀಧರ ಜಿ. ಹಾಗೂ ತೃತೀಯ ಬಹುಮಾನ ಬೆಳಗಾವಿಯ ನಮಿತಾ ನಾಯಕ ಅವರಿಗೆ ಲಭಿಸಿದೆ. ತೀರ್ಪುಗಾರರ ಮೆಚ್ಚುಗೆ ಬಹುಮಾನ ಬೆಳಗಾವಿ ಜಿಲ್ಲೆಯ ನೇಸರಗಿಯ ಗಂಗಾದೇವಿ ಚಕ್ರಸಾಲಿ, ಚಿಕ್ಕಮಗಳೂರಿನ ಆರ್. ಗಿರೀಶ, ಹುಬ್ಬಳ್ಳಿಯ ಸುಭಾಷ ಚವ್ಹಾಣ್, ಬೀದರ್ ಜಿಲ್ಲೆಯ ಮಾಳೆಗಾಂವದ ಆರ್ಜಿತ್ ದಂಡಿನ, ಹೊಸಕೋಟೆಯ ಭಾವಜೀವಿ ಭಾರ್ಗವ ಪಡೆದುಕೊಂಡಿದ್ದಾರೆ.