ಮಂಗಳವಾರ ರಾಜ್ಯಸಭೆಯಲ್ಲಿ ನಡೆದಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಸಭಾಪತಿಯವರು ಅದಕ್ಕಾಗಿಯೇ ತೀವ್ರ ವೇದನೆ ವ್ಯಕ್ತಪಡಿಸಿದರು. ರಾಜ್ಯಸಭೆಯ ಇತಿಹಾಸದಲ್ಲೇ ಅದು ಕರಾಳ ದಿನವಾಗಿ ಉಳಿಯುತ್ತದೆ. ಶಾಸನಸಭೆಯಲ್ಲಿ ಇರುವವರು ಆದರ್ಶಪ್ರಾಯವಾದ ಮಾದರಿ ನಡವಳಿಕೆ ಹೊಂದಿರಬೇಕು. ಆದರೆ, ಇಂತಹ ಘಟನೆಗಳು ಸರಿಯಾಗಿ ಚಿಂತಿಸುವ ಜನರು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.