‘ರಾತ್ರಿ ವಾಹನ ಸಂಚಾರ ನಿರ್ಬಂಧವನ್ನು ವಿರೋಧಿಸುತ್ತಿರುವುದು ಮರಳು ಕಳ್ಳಸಾಗಣೆದಾರರು, ಖಾಸಗಿ ಬಸ್ಗಳಲ್ಲಿ ತೆರಿಗೆ ವಂಚಿಸಿ ಸರಕು ಸಾಗಿಸುವವರು, ಕಾನೂನುಬಾಹಿರವಾಗಿ ಜಾನುವಾರು ಸಾಗಿಸುವವರು ಹಾಗೂ ಕೇರಳದಿಂದ ನಮ್ಮ ರಾಜ್ಯಕ್ಕೆ ಆಸ್ಪತ್ರೆ ಕಸವೂ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳನ್ನು ಹರಡುವ ಹೊಲಸನ್ನು ತಂದು ಸುರಿಯುವವರ ದುಷ್ಟಕೂಟಗಳು. ಇವರನ್ನು ಬೆಂಬಲಿಸುತ್ತಿರುವುದಾದರೂ ಏಕೆ’ ಎಂದು ಅವರು ಟೀಕಿಸಿದ್ದಾರೆ.