<p class="Briefhead"><strong>ಬೆಂಗಳೂರು</strong>: ‘ಸವಿತಾ ಮಹರ್ಷಿ ಜಯಂತಿ’ಯನ್ನು ಇನ್ನು ಮುಂದೆ ಸರ್ಕಾರವೇ ಆಚರಿಸಲಿದೆ. ಬರುವ ವರ್ಷದಿಂದ ರಥ ಸಪ್ತಮಿ ದಿನದಂದು ಆಚರಿಸಲು ತೀರ್ಮಾನಿಸಿದೆ.</p>.<p>ಈ ಸಂಬಂಧ ಸೆ. 20ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸುವಂತೆ ಸೂಚಿಸಿ ರುವ ಇದಕ್ಕಾಗಿ ₹ 69 ಲಕ್ಷ ಅನುದಾನ ಬಿಡುಗಡೆ ಮಾಡಿದೆ.<br />ಬೇಡಿಕೆ ಈಡೇರಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ಉಪಾಧ್ಯಕ್ಷ ಮಾವಳ್ಳಿ ಕೃಷ್ಣ ತಿಳಿಸಿದ್ದಾರೆ.</p>.<p class="Briefhead"><strong>‘ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯ’</strong></p>.<p>ಕೋಲಾರ: ‘ಡೀಸೆಲ್ ಬೆಲೆ ಹೆಚ್ಚಳ ದಿಂದ ಏಪ್ರಿಲ್ನಿಂದ ಇಲ್ಲಿಯವರೆಗೆ ಸಂಸ್ಥೆಗೆ ₹ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಹಾಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಉಮಾಶಂಕರ್ ಹೇಳಿದರು. ಸಂಸ್ಥೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಏಪ್ರಿಲ್ನಿಂದ ಈವರೆಗೆ ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ ₹ 9 ಹೆಚ್ಚಳವಾಗಿದೆ. ಲೀಟರ್ಗೆ ₹ 1 ಏರಿಕೆಯಾದರೂ ಸಂಸ್ಥೆಗೆ ದಿನಕ್ಕೆ ₹ 2.50 ಕೋಟಿ ನಷ್ಟವಾಗುತ್ತದೆ. ನಾಲ್ಕು ವರ್ಷದಿಂದ ಪ್ರಯಾಣ ದರ ಹೆಚ್ಚಿಸಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ಬೆಂಗಳೂರು</strong>: ‘ಸವಿತಾ ಮಹರ್ಷಿ ಜಯಂತಿ’ಯನ್ನು ಇನ್ನು ಮುಂದೆ ಸರ್ಕಾರವೇ ಆಚರಿಸಲಿದೆ. ಬರುವ ವರ್ಷದಿಂದ ರಥ ಸಪ್ತಮಿ ದಿನದಂದು ಆಚರಿಸಲು ತೀರ್ಮಾನಿಸಿದೆ.</p>.<p>ಈ ಸಂಬಂಧ ಸೆ. 20ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಚರಿಸುವಂತೆ ಸೂಚಿಸಿ ರುವ ಇದಕ್ಕಾಗಿ ₹ 69 ಲಕ್ಷ ಅನುದಾನ ಬಿಡುಗಡೆ ಮಾಡಿದೆ.<br />ಬೇಡಿಕೆ ಈಡೇರಿಸಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುವುದಾಗಿ ಸವಿತಾ ಕ್ಷೇಮಾಭಿವೃದ್ಧಿ ಮತ್ತು ಜಾಗೃತಿ ವೇದಿಕೆ ಉಪಾಧ್ಯಕ್ಷ ಮಾವಳ್ಳಿ ಕೃಷ್ಣ ತಿಳಿಸಿದ್ದಾರೆ.</p>.<p class="Briefhead"><strong>‘ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯ’</strong></p>.<p>ಕೋಲಾರ: ‘ಡೀಸೆಲ್ ಬೆಲೆ ಹೆಚ್ಚಳ ದಿಂದ ಏಪ್ರಿಲ್ನಿಂದ ಇಲ್ಲಿಯವರೆಗೆ ಸಂಸ್ಥೆಗೆ ₹ 100 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ. ಹಾಗಾಗಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್.ಉಮಾಶಂಕರ್ ಹೇಳಿದರು. ಸಂಸ್ಥೆಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಏಪ್ರಿಲ್ನಿಂದ ಈವರೆಗೆ ಡೀಸೆಲ್ ದರದಲ್ಲಿ ಪ್ರತಿ ಲೀಟರ್ಗೆ ₹ 9 ಹೆಚ್ಚಳವಾಗಿದೆ. ಲೀಟರ್ಗೆ ₹ 1 ಏರಿಕೆಯಾದರೂ ಸಂಸ್ಥೆಗೆ ದಿನಕ್ಕೆ ₹ 2.50 ಕೋಟಿ ನಷ್ಟವಾಗುತ್ತದೆ. ನಾಲ್ಕು ವರ್ಷದಿಂದ ಪ್ರಯಾಣ ದರ ಹೆಚ್ಚಿಸಿಲ್ಲ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>