<p><strong>ಬೆಂಗಳೂರು:</strong> ತಮ್ಮ ಕಚೇರಿಯ ಛೇಂಬರ್ನಲ್ಲಿ ಚಾಕು ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾದ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಇಲ್ಲಿನ 56ನೇ ಸೆಷನ್ಸ್ ಕೋರ್ಟ್ಗೆ ಹಾಜರಾಗಿ ಹೇಳಿಕೆ ನೀಡಿದರು.</p>.<p>ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೆಷನ್ಸ್ ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ನುಡಿದ ಮೊದಲ ಪ್ರಕರಣ ಇದು ಎನ್ನಲಾಗಿದೆ.</p>.<p>ಮಧ್ಯಾಹ್ನ 12 ಗಂಟೆಯಿಂದ 1.3ರವರೆಗೂ ಕಟಕಟೆಯಲ್ಲಿ ನಿಂತು ಮುಖ್ಯ ವಿಚಾರಣೆ ಎದುರಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.</p>.<p><strong>ಅವರು ಹೇಳಿದ್ದು:</strong> 2018ರ ಮಾರ್ಚ್ 7ರಂದು ಮಧ್ಯಾಹ್ನ 1.45ರ ಸಮಯದಲ್ಲಿ ತೇಜರಾಜ ಶರ್ಮ, ನನ್ನನ್ನು ಭೇಟಿಯಾಗಲು ಕೋರಿ ಜಮೇದಾರ್ ಮೂಲಕ ಚೀಟಿ ಕಳುಹಿಸಿದ್ದ. ಒಳಗೆ ಬರಹೇಳಿದೆ. ಬಂದು ನನ್ನೆದುರು ಕುಳಿತ ಅವನು, ತುಮಕೂರು-ಕೋಲಾರ ಜಿಲ್ಲೆಗಳಲ್ಲಿನ ಟೆಂಡರ್ ಹಂಚಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಐದು ಪುಟಗಳ ದಾಖಲೆ ನೀಡಿದ. ಅವುಗಳನ್ನು ಪರಿಶೀಲಿಸಿದ ನಾನು, ನಮ್ಮ ಅಸಿಸ್ಟೆಂಟ್ ರಿಜಿಸ್ಟ್ರಾರ್ ಲಲಿತಾ ಅವರನ್ನು ಭೇಟಿಯಾಗಿ ಎಲ್ಲವನ್ನೂ ತಿಳಿಸು ಎಂದೆ.</p>.<p>ಇಷ್ಟು ಹೇಳುತ್ತಿದ್ದಂತೆಯೇ ಆತ ಟೇಬಲ್ ಮೇಲೆ ಎಗರಿದ. ಅದೆಲ್ಲಿಂದ ಚಾಕು ತೆಗೆದನೋ ಗೊತ್ತಿಲ್ಲ. ಮೊದಲಿಗೆ ನನ್ನ ಹೃದಯ ಭಾಗಕ್ಕೆ ಇರಿದ. ನಂತರ ಹೊಟ್ಟೆ, ಆಮೇಲೆ ತೊಡೆಗೆ ಚುಚ್ಚಿದ. ಕೂಡಲೇ ನಾನು ಬಲವಾಗಿ ಪ್ರತಿಭಟಿಸಿದೆ. ಚಾಕುವಿನ ಆಳ ಇರಿತಗಳಿಂದ ತಪ್ಪಿಸಿಕೊಂಡೆ.</p>.<p>ವಿಚಾರಣೆ ಆಲಿಸಿದ ಸೆಷನ್ಸ್ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್, ‘ಪಾಟಿ ಸವಾಲನ್ನು ಇಂದೇ ನಡೆಸಿ’ ಎಂದು ಆರೋಪಿ ಪರ ವಕೀಲ ಸೂರ್ಯ ನಟರಾಜ ಶರ್ಮ ಅವರಿಗೆ ಸೂಚಿಸಿದರು.</p>.<p>ಆದರೆ, ನಟರಾಜ ಶರ್ಮ, ‘ಪ್ರಾಸಿಕ್ಯೂಷನ್ ನಮಗೆ ಬೇಕಾದ ದಾಖಲೆ ಒದಗಿಸುತ್ತಿಲ್ಲ. ಆದ್ದರಿಂದ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತಮ್ಮ ಕಚೇರಿಯ ಛೇಂಬರ್ನಲ್ಲಿ ಚಾಕು ಇರಿತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾದ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಶನಿವಾರ ಇಲ್ಲಿನ 56ನೇ ಸೆಷನ್ಸ್ ಕೋರ್ಟ್ಗೆ ಹಾಜರಾಗಿ ಹೇಳಿಕೆ ನೀಡಿದರು.</p>.<p>ರಾಜ್ಯದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಸೆಷನ್ಸ್ ಕೋರ್ಟ್ ಕಟಕಟೆಯಲ್ಲಿ ನಿಂತು ಸಾಕ್ಷಿ ನುಡಿದ ಮೊದಲ ಪ್ರಕರಣ ಇದು ಎನ್ನಲಾಗಿದೆ.</p>.<p>ಮಧ್ಯಾಹ್ನ 12 ಗಂಟೆಯಿಂದ 1.3ರವರೆಗೂ ಕಟಕಟೆಯಲ್ಲಿ ನಿಂತು ಮುಖ್ಯ ವಿಚಾರಣೆ ಎದುರಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಮೋಹನ್ ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದರು.</p>.<p><strong>ಅವರು ಹೇಳಿದ್ದು:</strong> 2018ರ ಮಾರ್ಚ್ 7ರಂದು ಮಧ್ಯಾಹ್ನ 1.45ರ ಸಮಯದಲ್ಲಿ ತೇಜರಾಜ ಶರ್ಮ, ನನ್ನನ್ನು ಭೇಟಿಯಾಗಲು ಕೋರಿ ಜಮೇದಾರ್ ಮೂಲಕ ಚೀಟಿ ಕಳುಹಿಸಿದ್ದ. ಒಳಗೆ ಬರಹೇಳಿದೆ. ಬಂದು ನನ್ನೆದುರು ಕುಳಿತ ಅವನು, ತುಮಕೂರು-ಕೋಲಾರ ಜಿಲ್ಲೆಗಳಲ್ಲಿನ ಟೆಂಡರ್ ಹಂಚಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಐದು ಪುಟಗಳ ದಾಖಲೆ ನೀಡಿದ. ಅವುಗಳನ್ನು ಪರಿಶೀಲಿಸಿದ ನಾನು, ನಮ್ಮ ಅಸಿಸ್ಟೆಂಟ್ ರಿಜಿಸ್ಟ್ರಾರ್ ಲಲಿತಾ ಅವರನ್ನು ಭೇಟಿಯಾಗಿ ಎಲ್ಲವನ್ನೂ ತಿಳಿಸು ಎಂದೆ.</p>.<p>ಇಷ್ಟು ಹೇಳುತ್ತಿದ್ದಂತೆಯೇ ಆತ ಟೇಬಲ್ ಮೇಲೆ ಎಗರಿದ. ಅದೆಲ್ಲಿಂದ ಚಾಕು ತೆಗೆದನೋ ಗೊತ್ತಿಲ್ಲ. ಮೊದಲಿಗೆ ನನ್ನ ಹೃದಯ ಭಾಗಕ್ಕೆ ಇರಿದ. ನಂತರ ಹೊಟ್ಟೆ, ಆಮೇಲೆ ತೊಡೆಗೆ ಚುಚ್ಚಿದ. ಕೂಡಲೇ ನಾನು ಬಲವಾಗಿ ಪ್ರತಿಭಟಿಸಿದೆ. ಚಾಕುವಿನ ಆಳ ಇರಿತಗಳಿಂದ ತಪ್ಪಿಸಿಕೊಂಡೆ.</p>.<p>ವಿಚಾರಣೆ ಆಲಿಸಿದ ಸೆಷನ್ಸ್ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್, ‘ಪಾಟಿ ಸವಾಲನ್ನು ಇಂದೇ ನಡೆಸಿ’ ಎಂದು ಆರೋಪಿ ಪರ ವಕೀಲ ಸೂರ್ಯ ನಟರಾಜ ಶರ್ಮ ಅವರಿಗೆ ಸೂಚಿಸಿದರು.</p>.<p>ಆದರೆ, ನಟರಾಜ ಶರ್ಮ, ‘ಪ್ರಾಸಿಕ್ಯೂಷನ್ ನಮಗೆ ಬೇಕಾದ ದಾಖಲೆ ಒದಗಿಸುತ್ತಿಲ್ಲ. ಆದ್ದರಿಂದ ಇನ್ನಷ್ಟು ಕಾಲಾವಕಾಶ ನೀಡಬೇಕು’ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>