‘ಎಸ್ಐಟಿ ತನಿಖೆ ಬೇಡ’, ‘ಮಹಿಳೆಯರ ತೇಜೋವಧೆ ಮಾಡಿ ಪೆನ್ಡ್ರೈವ್ ವಿತರಿಸಿದವರನ್ನು ಬಂಧಿಸಿ’, ‘ಪೆನ್ಡ್ರೈವ್ ವಿತರಿಸಿದವರ ವಿರುದ್ಧ ನ್ಯಾಯಾಂಗ ತನಿಖೆಯಾಗಲಿ’, ‘ನೀವು ರಾಜಕಾರಣ ಮಾಡಿ, ನಿಮ್ಮ ರಾಜಕಾರಣದಲ್ಲಿ ಹೆಣ್ಣು ಮಕ್ಕಳನ್ನು ಬೀದಿಗೆ ತರಬೇಡಿ’ ಎಂಬ ಬರಹವುಳ್ಳ ಫಲಕಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಸ್ತೆ ತಡೆ ನಡೆಸಿದರು.