‘ಕುರುಬರು ದೇಶದ ಮೂಲನಿವಾಸಿಗಳು. ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಯಲಾಗುತ್ತಿದೆ ಮತ್ತು ಬೇರೆ ಬೇರೆ ಮೀಸಲಾತಿ ಪಟ್ಟಿಯಲ್ಲಿ ನಮೂದಿಸಲಾಗಿದೆ. ಈ ನಿಟ್ಟಿನಲ್ಲಿ ಕುರುಬ ಸಮುದಾಯದ ಜೊತೆಗೆ, ಎಲ್ಲ ಹಿಂದುಳಿದ ವರ್ಗಗಳ ಸಮಸ್ಯೆಗಳ ಬಗ್ಗೆ ಕಾಲ–ಕಾಲಕ್ಕೆ ಚರ್ಚಿಸಿ, ಶೋಷಿತ ವರ್ಗಗಳನ್ನು ಸಂಘಟಿಸುವ ಮತ್ತು ಹೋರಾಟದ ನೇತೃತ್ವ ವಹಿಸುವ ಕೆಲಸವನ್ನು ಎಸ್ಐಐ ಮಾಡಲಿದೆ’ ಎಂದರು.