ತುಮಕೂರು: ‘ಸ್ವಾಮೀಜಿ ಅವರಿಗೆ ಶ್ವಾಸಕೋಶದ ಸೋಂಕು ಕಡಿಮೆ ಆಗಿದೆ. ಆದರೆ, ದೇಹದಲ್ಲಿ ಜೀವಸತ್ವದ ಅಂಶಗಳು ಹೆಚ್ಚಾಗಿಲ್ಲ. ಇದರಿಂದ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ. ಎರಡು ದಿನಕ್ಕೆ ಒಮ್ಮೆ ನೀರನ್ನು ಹೊರ ತೆಗೆಯುತ್ತಿದ್ದೇವೆ. ಜೀವಸತ್ವ ಹೆಚ್ಚಲು ಔಷಧಿ ನೀಡಲಾಗುತ್ತಿದೆ’ ಎಂದು ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ಮಾಹಿತಿ ನೀಡಿದರು.