ಮಠಕ್ಕೆ ಸ್ಥಳಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸ್ವಾಮೀಜಿಯವರ ಆರೋಗ್ಯದಲ್ಲಿ ಯಾವುದೇ ರೀತಿ ವ್ಯತ್ಯಾಸಗಳಿಲ್ಲ. ಸ್ಥಿರವಾಗಿದೆ. ಸೋಂಕು ಕಡಿಮೆಯಾಗಿದೆ. ನಾವು ಬುಧವಾರ ಅಥವಾ ಗುರುವಾರ ಮಠಕ್ಕೆ ಸ್ಥಳಾಂತರ ಮಾಡಬೇಕು ಎಂಬ ಉದ್ದೇಶವಿತ್ತು. ಆದರೆ, ತಡರಾತ್ರಿ ಸ್ವಾಮೀಜಿ ಅವರು ಮಠಕ್ಕೆ ಹೋಗಬೇಕು ಎಂದು ಹಠ ಮಾಡಿದರು. ಹೀಗಾಗಿ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದರು.