ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಪೆನ್ಡ್ರೈವ್ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ನನ್ನ ಪಾತ್ರ ಇಲ್ಲ. ಪ್ರಜ್ವಲ್ ಪ್ರಕರಣ ಹೊರಬಂದ ಬಳಿಕ ನನ್ನನ್ನು ಸಂಪರ್ಕಿಸಿದ್ದ ಅವರು, ಶಿವಕುಮಾರ್ ಅವರನ್ನು ಭೇಟಿ ಮಾಡಿಸುವಂತೆ ಕೋರಿದ್ದರು. ಹಾಗಾಗಿ, ದೂರವಾಣಿಯಲ್ಲಿ ಮಾತನಾಡಿದ್ದೆ. ಅದೇ ದೊಡ್ಡ ಅಪರಾಧವಾಗಿದೆ’ ಎಂದರು.