<p><strong>ಬೆಂಗಳೂರು:</strong>’ಕಾಯಕವೇ ಕೈಲಾಸ’– ಶರಣರ ಈ ತತ್ವವನ್ನು ದೀರ್ಘಕಾಲದ ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಸ್ಫೂರ್ತಿಯ ಸೆಲೆ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಅವರ ಬದುಕು, ಬದುಕಿನ ರೀತಿಯೇ ಓದಿಸಿಕೊಳ್ಳುವ; ಓದಲೇಬೇಕಾದ ಉತ್ತಮ ಪುಸ್ತಕ. ಸದ್ಯ ಉಸಿರಾಟದ ಸಮಸ್ಯೆಯಿಂದ ಬಳಲಿರುವ ಅವರ ಆರೋಗ್ಯದ ಚೇತರಿಕೆಗಾಗಿ ಲಕ್ಷಾಂತರ ಜನರು ಕೈಜೋಡಿಸಿ ಪ್ರಾರ್ಥಿಸುತ್ತಿದ್ದಾರೆ. ಅಷ್ಟೊಂದು ಜನರ ಪ್ರೀತಿ, ಅಭಿಮಾನಿ, ಭಕ್ತಿ ಗಳಿಸಿರುವ ಕಾಯಕ ಯೋಗಿಯ ದಿನಚರಿಯು ಸಾಮಾನ್ಯವಾಗಿರಲಿಲ್ಲ.</p>.<p>’ಮಿತ ಆಹಾರ, ನಿರಂತರ ಕಾಯಕ, ಓದು ಹಾಗೂ ಇಷ್ಟಲಿಂಗ ಪೂಜೆ,..’ ಇವುಗಳೇ ಶಿವಕುಮಾರ ಸ್ವಾಮೀಜಿಯ ಶ್ರದ್ಧೆಯ ಗುಟ್ಟು ಎನ್ನಬಹುದು. ಬೆಳಗಿನ ಜಾವ 2:15– ನಮಗೆ ಗಾಢ ನಿದ್ರೆ, ಬೆಚ್ಚಗಿನ ಹೊದಿಕೆಯನ್ನು ಸರಿಪಡಿಸಿಕೊಳ್ಳುವ ಸಮಯ. ಆದರೆ, ಸ್ವಾಮೀಜಿ ನಿತ್ಯ ಏಳುತ್ತಿದುದು ಇದೇ ಹೊತ್ತಿಗೆ. ನಿತ್ಯ ಕರ್ಮ, ಶಿವ ಪೂಜೆ, ತತ್ವ ಪಠಣ,..ಹೀಗೆ ಶುರುವಾಗುವ ದಿನಚರಿಗೆ ವಿಶ್ರಾಂತಿ ಸಿಗುತ್ತಿದುದು ರಾತ್ರಿ 11ರ ನಂತರವೇ.</p>.<p>ವಿದ್ಯಾರ್ಥಿಗಳಿಗೆ ಬೋಧನೆ, ಆಶೀರ್ವಚನ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ, ಊಟ–ತಿಂಡಿ(ಪ್ರಸಾದ) ವ್ಯವಸ್ಥೆಯನ್ನು ಗಮನಿಸುವುದು, ಪತ್ರ ವ್ಯವಹಾರ, ದಿನ ಪತ್ರಿಕೆ ಕಣ್ಣಾಡಿಸುವುದು, ಕಾರ್ಯಾಲಯದ ಕೆಲಸ, ಭಕ್ತಾದಿಗಳ ಸಂದರ್ಶನ, ಸಮಸ್ಯೆಗಳಿಗೆ ಪರಿಹಾರ ನೀಡುವುದು, ಯಂತ್ರಧಾರಣೆ,..ಹೀಗೆ ಬಿಡುವಿರದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.</p>.<p>ಈ ಎಲ್ಲದರ ನಡುವೆಯೂ ಭಕ್ತಾದಿಗಳು ದೂರದ ಊರುಗಳಿಗೆ ಶಿವಪೂಜೆ ಸೇರಿ ಇತರೆ ಕಾರ್ಯಕ್ರಮಗಳಿಗೆ ಬರುವಂತೆ ಪ್ರೀತಿಯ ಒತ್ತಾಯ ಬಂದರೆ, ಹೋಗದೆ ಇರುತ್ತಿರಲಿಲ್ಲ. ನಿತ್ಯ ಮೂರರಿಂದ– ಮೂರೂಕಾಲು ಗಂಟೆ ಮಾತ್ರ ನಿದ್ರೆಗೆ ಮೀಸಲಾಗುತ್ತಿದ್ದ ಶಿವಕುಮಾರ ಸ್ವಾಮೀಜಿ ದಿನಚರಿ ಅಚ್ಚರಿ ಮೂಡಿಸುವಂಥದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>’ಕಾಯಕವೇ ಕೈಲಾಸ’– ಶರಣರ ಈ ತತ್ವವನ್ನು ದೀರ್ಘಕಾಲದ ಬದುಕಿನುದ್ದಕ್ಕೂ ಅಳವಡಿಸಿಕೊಂಡವರು ಸ್ಫೂರ್ತಿಯ ಸೆಲೆ, ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಅವರ ಬದುಕು, ಬದುಕಿನ ರೀತಿಯೇ ಓದಿಸಿಕೊಳ್ಳುವ; ಓದಲೇಬೇಕಾದ ಉತ್ತಮ ಪುಸ್ತಕ. ಸದ್ಯ ಉಸಿರಾಟದ ಸಮಸ್ಯೆಯಿಂದ ಬಳಲಿರುವ ಅವರ ಆರೋಗ್ಯದ ಚೇತರಿಕೆಗಾಗಿ ಲಕ್ಷಾಂತರ ಜನರು ಕೈಜೋಡಿಸಿ ಪ್ರಾರ್ಥಿಸುತ್ತಿದ್ದಾರೆ. ಅಷ್ಟೊಂದು ಜನರ ಪ್ರೀತಿ, ಅಭಿಮಾನಿ, ಭಕ್ತಿ ಗಳಿಸಿರುವ ಕಾಯಕ ಯೋಗಿಯ ದಿನಚರಿಯು ಸಾಮಾನ್ಯವಾಗಿರಲಿಲ್ಲ.</p>.<p>’ಮಿತ ಆಹಾರ, ನಿರಂತರ ಕಾಯಕ, ಓದು ಹಾಗೂ ಇಷ್ಟಲಿಂಗ ಪೂಜೆ,..’ ಇವುಗಳೇ ಶಿವಕುಮಾರ ಸ್ವಾಮೀಜಿಯ ಶ್ರದ್ಧೆಯ ಗುಟ್ಟು ಎನ್ನಬಹುದು. ಬೆಳಗಿನ ಜಾವ 2:15– ನಮಗೆ ಗಾಢ ನಿದ್ರೆ, ಬೆಚ್ಚಗಿನ ಹೊದಿಕೆಯನ್ನು ಸರಿಪಡಿಸಿಕೊಳ್ಳುವ ಸಮಯ. ಆದರೆ, ಸ್ವಾಮೀಜಿ ನಿತ್ಯ ಏಳುತ್ತಿದುದು ಇದೇ ಹೊತ್ತಿಗೆ. ನಿತ್ಯ ಕರ್ಮ, ಶಿವ ಪೂಜೆ, ತತ್ವ ಪಠಣ,..ಹೀಗೆ ಶುರುವಾಗುವ ದಿನಚರಿಗೆ ವಿಶ್ರಾಂತಿ ಸಿಗುತ್ತಿದುದು ರಾತ್ರಿ 11ರ ನಂತರವೇ.</p>.<p>ವಿದ್ಯಾರ್ಥಿಗಳಿಗೆ ಬೋಧನೆ, ಆಶೀರ್ವಚನ, ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿ, ಊಟ–ತಿಂಡಿ(ಪ್ರಸಾದ) ವ್ಯವಸ್ಥೆಯನ್ನು ಗಮನಿಸುವುದು, ಪತ್ರ ವ್ಯವಹಾರ, ದಿನ ಪತ್ರಿಕೆ ಕಣ್ಣಾಡಿಸುವುದು, ಕಾರ್ಯಾಲಯದ ಕೆಲಸ, ಭಕ್ತಾದಿಗಳ ಸಂದರ್ಶನ, ಸಮಸ್ಯೆಗಳಿಗೆ ಪರಿಹಾರ ನೀಡುವುದು, ಯಂತ್ರಧಾರಣೆ,..ಹೀಗೆ ಬಿಡುವಿರದ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.</p>.<p>ಈ ಎಲ್ಲದರ ನಡುವೆಯೂ ಭಕ್ತಾದಿಗಳು ದೂರದ ಊರುಗಳಿಗೆ ಶಿವಪೂಜೆ ಸೇರಿ ಇತರೆ ಕಾರ್ಯಕ್ರಮಗಳಿಗೆ ಬರುವಂತೆ ಪ್ರೀತಿಯ ಒತ್ತಾಯ ಬಂದರೆ, ಹೋಗದೆ ಇರುತ್ತಿರಲಿಲ್ಲ. ನಿತ್ಯ ಮೂರರಿಂದ– ಮೂರೂಕಾಲು ಗಂಟೆ ಮಾತ್ರ ನಿದ್ರೆಗೆ ಮೀಸಲಾಗುತ್ತಿದ್ದ ಶಿವಕುಮಾರ ಸ್ವಾಮೀಜಿ ದಿನಚರಿ ಅಚ್ಚರಿ ಮೂಡಿಸುವಂಥದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>