ಸಿದ್ದಾಪುರ (ಕೊಡಗು): ಇಲ್ಲಿನ ಮೈಸೂರು ರಸ್ತೆಯ ಬಡಾವಣೆಯಲ್ಲಿ ಶನಿವಾರ ಮಕ್ಕಳು ಆಟವಾಡುತ್ತಿದ್ದ ವೇಳೆ ಕಾಡಾನೆಯೊಂದು ಮೈದಾನದ ಬಳಿಗೆ ಬಂದಿದ್ದು, ಸ್ವಲ್ಪೇ ಅಂತರದಲ್ಲಿ ಮಕ್ಕಳು ಪಾರಾಗಿದ್ದಾರೆ.
ಸ್ಥಳೀಯ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾಗ ಕಾಫಿ ತೋಟದಿಂದ ಬಡಾವಣೆಯತ್ತ ಕಾಡಾನೆ ಬಂದಿದೆ. ಈ ವೇಳೆ ಮಕ್ಕಳು ಕಿರುಚಿಕೊಂಡಿದ್ದಾರೆ. ನಂತರ, ಆನೆ ಮರಳಿ ತೋಟಕ್ಕೆ ವಾಪಸ್ ಹೋಗಿದೆ.
ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಜನವಸತಿ ಪ್ರದೇಶಕ್ಕೆ ಕಾಡಾನೆ ಹಿಂಡುಗಳು ಬರುತ್ತಿವೆ. ಇದರಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.