ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಕಾಡಾನೆಯಿಂದ ಪಾರಾದ ಮಕ್ಕಳು

Published 30 ಏಪ್ರಿಲ್ 2023, 13:21 IST
Last Updated 30 ಏಪ್ರಿಲ್ 2023, 13:21 IST
ಅಕ್ಷರ ಗಾತ್ರ

ಸಿದ್ದಾಪುರ (ಕೊಡಗು): ಇಲ್ಲಿನ ಮೈಸೂರು ರಸ್ತೆಯ ಬಡಾವಣೆಯಲ್ಲಿ ಶನಿವಾರ ಮಕ್ಕಳು ಆಟವಾಡುತ್ತಿದ್ದ ವೇಳೆ ಕಾಡಾನೆಯೊಂದು ಮೈದಾನದ ಬಳಿಗೆ ಬಂದಿದ್ದು, ಸ್ವಲ್ಪೇ ಅಂತರದಲ್ಲಿ ಮಕ್ಕಳು ಪಾರಾಗಿದ್ದಾರೆ.

ಸ್ಥಳೀಯ ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾಗ ಕಾಫಿ ತೋಟದಿಂದ ಬಡಾವಣೆಯತ್ತ ಕಾಡಾನೆ ಬಂದಿದೆ. ಈ ವೇಳೆ ಮಕ್ಕಳು ಕಿರುಚಿಕೊಂಡಿದ್ದಾರೆ. ನಂತರ, ಆನೆ ಮರಳಿ ತೋಟಕ್ಕೆ ವಾಪಸ್ ಹೋಗಿದೆ.

ಈ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಜನವಸತಿ ಪ್ರದೇಶಕ್ಕೆ ಕಾಡಾನೆ ಹಿಂಡುಗಳು ಬರುತ್ತಿವೆ. ಇದರಿಂದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT