<p><strong>ಸುವರ್ಣ ವಿಧಾನಸೌಧ (ಬೆಳಗಾವಿ)</strong>: ‘ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲ. ಹಾಗಂತ ಅಷ್ಟೆಲ್ಲ ತಲೆ ಕೆಡಿಸಿಕೊಂಡು ರಾಜಕೀಯ ಮಾಡಬೇಕಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.</p>.<p>ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಉತ್ತರ ನೀಡಲು ನಿಂತ ಅವರು, ‘ನಿನ್ನೆಯೇ ಉತ್ತರ ನೀಡಬೇಕಿತ್ತು. ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸ್ವಲ್ಪ ನಿಶ್ಶಕ್ತನಾಗಿದ್ದೇನೆ’ ಎಂದರು.</p>.<p>ಮಧ್ಯಪ್ರವೇಶಿಸಿದ ಆರ್. ಅಶೋಕ, ‘ನಿಮಗೆ ರಾಜಕೀಯ ಶಕ್ತಿ ಬಂದಂತಿದೆ. ಮುಖದಲ್ಲಿ ಕಳೆ ಕಾಣುತ್ತಿದೆ’ ಎಂದು ಹೇಳಿದರು.</p>.<p>ಆಗ ಮುಖ್ಯಮಂತ್ರಿ, ‘ರಾಜಕೀಯ ನಿಶ್ಯಕ್ತಿ ಬರಲು ಅವಕಾಶ ಇಲ್ಲವೇ ಇಲ್ಲ. ಶಾರೀರಿಕವಾಗಿ ನಿಶ್ಯಕ್ತಿ ಇರುತ್ತದೆ’ ಎಂದರು.</p>.<p>ಬಿಜೆಪಿಯ ವಿ. ಸುನಿಲ್ಕುಮಾರ್, ‘ಇತ್ತೀಚೆಗೆ ನೀವು ರಾಜಕೀಯವಾಗಿ ನಿಶ್ಯಕ್ತ ಆಗಿದ್ದೀರಿ ಎನ್ನುವುದು ಚರ್ಚೆಯಾಗುತ್ತಿದೆ’ ಎಂದರು. ಮತ್ತೆ ಮುಖ್ಯಮಂತ್ರಿ, ‘ರಾಜಕೀಯ ನಿಶ್ಶಕ್ತಿ ಎಂಬುದೇ ಇಲ್ಲ. ಎಂದಿಗೂ ಬರುವುದಿಲ್ಲ’ ಎಂದು ಜೋರಾಗಿಯೇ ಹೇಳಿದರು.</p>.<p>‘ಎಲ್ಲರೂ ಅಭಿನಂದನೆ ಹೇಳುವುದನ್ನು ನೋಡಿದರೆ ಐದು ವರ್ಷ ಪೂರ್ಣಗೊಳಿಸುವುದಿಲ್ಲವೆಂದು ಕಾಣಿಸುತ್ತದೆ’ ಎಂದು ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಕಾಲೆಳೆದರು.</p>.<p>‘ನಿಮ್ಮಲ್ಲಿ ಸಂಶಯ ಇರುವುದಕ್ಕೆ ನಿಮ್ಮನ್ನು ಪಾರ್ಟಿಯಿಂದ ಹೊರಹಾಕಿದ್ದಾರೆ. ಅಂತಹ ಸಂಶಯ ಇಟ್ಟುಕೊಳ್ಳಬೇಡಿ’ ಎಂದು ಸಿದ್ದರಾಮಯ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುವರ್ಣ ವಿಧಾನಸೌಧ (ಬೆಳಗಾವಿ)</strong>: ‘ನನಗೆ ರಾಜಕೀಯ ನಿಶ್ಯಕ್ತಿ ಎಂಬುದೇ ಇಲ್ಲ. ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ. ಮುಂದೆಯೂ ಇರುವುದಿಲ್ಲ. ಹಾಗಂತ ಅಷ್ಟೆಲ್ಲ ತಲೆ ಕೆಡಿಸಿಕೊಂಡು ರಾಜಕೀಯ ಮಾಡಬೇಕಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.</p>.<p>ಉತ್ತರ ಕರ್ನಾಟಕ ಕುರಿತ ಚರ್ಚೆಗೆ ಉತ್ತರ ನೀಡಲು ನಿಂತ ಅವರು, ‘ನಿನ್ನೆಯೇ ಉತ್ತರ ನೀಡಬೇಕಿತ್ತು. ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸ್ವಲ್ಪ ನಿಶ್ಶಕ್ತನಾಗಿದ್ದೇನೆ’ ಎಂದರು.</p>.<p>ಮಧ್ಯಪ್ರವೇಶಿಸಿದ ಆರ್. ಅಶೋಕ, ‘ನಿಮಗೆ ರಾಜಕೀಯ ಶಕ್ತಿ ಬಂದಂತಿದೆ. ಮುಖದಲ್ಲಿ ಕಳೆ ಕಾಣುತ್ತಿದೆ’ ಎಂದು ಹೇಳಿದರು.</p>.<p>ಆಗ ಮುಖ್ಯಮಂತ್ರಿ, ‘ರಾಜಕೀಯ ನಿಶ್ಯಕ್ತಿ ಬರಲು ಅವಕಾಶ ಇಲ್ಲವೇ ಇಲ್ಲ. ಶಾರೀರಿಕವಾಗಿ ನಿಶ್ಯಕ್ತಿ ಇರುತ್ತದೆ’ ಎಂದರು.</p>.<p>ಬಿಜೆಪಿಯ ವಿ. ಸುನಿಲ್ಕುಮಾರ್, ‘ಇತ್ತೀಚೆಗೆ ನೀವು ರಾಜಕೀಯವಾಗಿ ನಿಶ್ಯಕ್ತ ಆಗಿದ್ದೀರಿ ಎನ್ನುವುದು ಚರ್ಚೆಯಾಗುತ್ತಿದೆ’ ಎಂದರು. ಮತ್ತೆ ಮುಖ್ಯಮಂತ್ರಿ, ‘ರಾಜಕೀಯ ನಿಶ್ಶಕ್ತಿ ಎಂಬುದೇ ಇಲ್ಲ. ಎಂದಿಗೂ ಬರುವುದಿಲ್ಲ’ ಎಂದು ಜೋರಾಗಿಯೇ ಹೇಳಿದರು.</p>.<p>‘ಎಲ್ಲರೂ ಅಭಿನಂದನೆ ಹೇಳುವುದನ್ನು ನೋಡಿದರೆ ಐದು ವರ್ಷ ಪೂರ್ಣಗೊಳಿಸುವುದಿಲ್ಲವೆಂದು ಕಾಣಿಸುತ್ತದೆ’ ಎಂದು ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಕಾಲೆಳೆದರು.</p>.<p>‘ನಿಮ್ಮಲ್ಲಿ ಸಂಶಯ ಇರುವುದಕ್ಕೆ ನಿಮ್ಮನ್ನು ಪಾರ್ಟಿಯಿಂದ ಹೊರಹಾಕಿದ್ದಾರೆ. ಅಂತಹ ಸಂಶಯ ಇಟ್ಟುಕೊಳ್ಳಬೇಡಿ’ ಎಂದು ಸಿದ್ದರಾಮಯ್ಯ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>