ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಪ್ಪು ಆವರಿಸಿದೆ. ಇನ್ನಾದರೂದೇಶ ಮತ್ತು ಜನರ ಅಭಿವೃದ್ಧಿ ಬಗ್ಗೆ ಅವರು ಧ್ಯಾನ ಮಾಡಲಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅವರ ಸಾವಿನ ಬಗ್ಗೆ ನಾನುಎಲ್ಲಿಯೂ ಮಾತನಾಡಿಲ್ಲ. ಅವರುನೂರು ವರ್ಷ ಆರೋಗ್ಯ ಪೂರ್ಣವಾಗಿ ಜೀವಿಸಲಿ,’ಎಂದು ತಿಳಿಸಿದರು.
‘ನನ್ನ ಸಾವನ್ನು ಬಯಸುವವರಿಗೆ ನಾನು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ. ಅವರುನೂರುಕಾಲ ಬಾಳಲಿ,’ ಎಂದು ಈಶ್ವರಪ್ಪ ಅವರನ್ನು ಗುರಿಯಾಗಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಟ್ವೀಟ್ ಮಾಡಿದ್ದರು ಎನ್ನಲಾಗಿದೆ.
ನನ್ನ ಸಾವನ್ನು ಬಯಸುವವರಿಗೆ ನಾನು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ. ಅವರು ನೂರುಕಾಲ ಬಾಳಲಿ. pic.twitter.com/3NrOe7OcBf